ಆರೋಗ್ಯ ಪರೀಕ್ಷೆಯಿಂದ ಭವಿಷ್ಯದ ಅಪಾಯ ತಪ್ಪಿಸಬಹುದು: ಡಾ.ಪರಮೇಶ್
ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ಧಗಂಗಾ ಅಸ್ಪತ್ರೆ ಶಿವಕುಮಾರ ಮಹಾ ಸ್ವಾಮೀಜಿಯವರ ಆಶೀರ್ವಾದದಿಂದ ಆರಂಭವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ಶಿಬಿರಗಳ ಮೂಲಕ ಜನರ ಮನೆ ಮನೆ ಬಾಗಿಲಿಗೆ ತಲುಪಿ ಆರೋಗ್ಯ ದಾಸೋಹ ನೀಡುತ್ತಿದ್ದು ಶ್ರೇಷ್ಠ ಸೇವೆಗೆ ಹೆಸರಾಗಿದೆ ಎಂದರು. ಇದೇ ವೇಳೆ ಗ್ರಾಮದ 200 ಕ್ಕೂ ಹೆಚ್ಚು ಜನರಿಗೆ 10ಕ್ಕೂ ಹೆಚ್ಚು ವಿಭಾಗಗಳಲ್ಲಿ ಆರೋಗ್ಯ ಪರೀಕ್ಷೆ ನಡೆಸಲಾಯಿತು.