ಫೆ.6ಕ್ಕೆ ಪ್ರಧಾನಿ ಮೋದಿ ಅವರಿಂದ ಎಚ್ಎಎಲ್ ಲೋಕಾರ್ಪಣೆ
ತುಮಕೂರು:ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಎಚ್‌ಎಎಲ್ ಘಟಕ ಹಾಗೂಚಿಕ್ಕನಾಯನಹಳ್ಳಿ ಮತ್ತು ತಿಪಟೂರಿನ ಜಲ್‌ಜೀವನ್ ಮಿಷನ್ ಯೋಜನೆಗೆ ಶಂಕು ಸ್ಥಾಪನೆಗೆ ಉದ್ಘಾಟನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಫೆಬ್ರವರಿ ೬ರಂದು  ಬರುವ ನಿರೀಕ್ಷೆ ಇರುವುದರಿಂದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್ ಹಾಗೂ ಇನ್ನಿತರೆ ಅಧಿಕಾರಿ ಗಳೊಂದಿಗೆ  ಸ್ಥಳ ಪರಿಶೀಲನೆ ನಡೆಸಿದರು.