ಪಟ್ಟಣದಲ್ಲಿ ಬೃಹತ್ ರಾಮಾಂಜನೇಯ ರಥ ಯಾತ್ರೆ
ವಿಜಯಪುರ:ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಹನುಮ ಮಾಲಾಧಾರಿಗಳಿಂದ ಬೃಹತ್ ರಥ ಯಾತ್ರೆ ಜರುಗಿತು.
ಪ್ರತಿ ವರ್ಷ ವಿಶೇಷವಾಗಿ ಆಚರಣೆಗೊಳ್ಳುತ್ತಿರು ರಥಯಾತ್ರೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಆರಂಭವಾಯಿತು. ಅಪಾರ ಸಂಖ್ಯೆಯ ಹನುಮ ಮಾಲಾಧಾರಿಗಳು ಭಾಗಿಯಾದರು.
ಮೆರವಣಿಗೆಯಲ್ಲಿ ಬೃಹತ್ ಶ್ರೀರಾಮನ ಮೂರ್ತಿ ಗಮನ ಸೆಳೆಯಿತು. ಹನುಮ ಮಾಲಾಧಾರಿಗಳು ಕೂಡ ಹನುಮ ನಾಮ ಜನಿಸುತ್ತಿರುವುದು ಕಂಡುಬಂತು.