ಜಿಲ್ಲೆಯ ಜನ ಬಿಜೆಪಿಯನ್ನು ನಂಬದ ಸ್ಥಿತಿ ಇದೆ: ಶಾಸಕ ಭೀಮಣ್ಣ
ಶಿರಸಿ:ಈ ಹಿಂದೆ ಇರುವ ಬಿಜೆಪಿ ಸರಕಾರ ನಮ್ಮ ಜಿಲ್ಲೆಗೆ ಏನು ಕೊಟ್ಟಿದೆ ಎನ್ನುವುದನ್ನು ಹೇಳಲಿ. ಎಲ್ಲ ಯೋಜನೆಗಳನ್ನು ಕಾಂಗ್ರೆಸ್ ನೀಡಿದೆ. ಅದನ್ನೇ ಇವರು ಹೆಸರು ಬದಲಾಯಿಸಿ ತಾವು ನೀಡಿರುವಾಗಿ ಬಿಂಬಿಸುತ್ತಿದ್ದಾರೆ. ನಾವು ಬಂದ ನಂತರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ನಗರಾಭಿವೃದ್ಧಿ, ಪಟ್ಟಣ, ಜಿಲ್ಲೆಯ ಅಭಿವೃದ್ಧಿ ನಮ್ಮ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಶಾಸಕ ಭೀಮಣ್ಣ ಹೇಳಿದರು.
ಅವರು ನಗರದ ಸುಪ್ರಿಯಾ ಹೊಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ನಮ್ಮಲ್ಲಿಯ ಯಾವ ಬಿಜೆಪಿ ನಾಯಕರೂ ಅಡಕೆ ದರದ ಬಗ್ಗೆ ಮಾತೆತ್ತುತ್ತಿಲ್ಲ. ಜಿಲ್ಲೆಯ ಜೀವನಾಡಿ ವಾಣಿಜ್ಯ ಬೆಳೆ ಅಡಕೆ ದರ ನೆಲಕಚ್ಚಿದೆ ಆದರೆ ಚುನಾವಣೆ ಬಂದಾಗ ಮಾತ್ರ ಅಭಿವೃದ್ಧಿ ಪರ ಎನ್ನುವ ಬಿಜೆಪಿಯನ್ನು ಜಿಲ್ಲೆಯ ಜನ ನಂಬದ ಸ್ಥಿತಿ ಇದೆ ಈ ಚುನಾವಣೆಯಲ್ಲಿ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದರು.