  : ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!
ಬೆಂಗಳೂರು:ಬೆಂಗಳೂರು ನಗರದ 220/66/11ಕೆ.ವಿ ಎನ್.ಆರ್.ಎಸ್ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (  ) ನಗರದ ಹಲವೆಡೆ ಸೆ.19 ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ () ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.
ನಗರದ ಮಂಜುನಾಥ ನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್. ಪುರ, ಸುಬ್ರಮಣ್ಯ ನಗರ, ವಿಜಯನಗರ, ರಾಜಾಜಿನಗರ 2 ನೇ ಬ್ಲಾಕ್ & 6ನೇ ಬ್ಲಾಕ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ, ಶಂಕರಮಠ, ಬ್ರಿಗೇಡ್ ಅಪಾರ್ಟ್‌ಮೆಂಟ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 8 ನೇ ಕ್ರಾಸ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ | : ಕಾಂಗ್ರೆಸ್‌ ಸರ್ಕಾರದ ಮತ್ತೊಂದು ʼಅದ್ಧೂರಿʼ ಹಗರಣಕ್ಕೆ ದಸರಾ ವೇದಿಕೆಯಾಗದಿರಲಿ; ಆರ್‌. ಅಶೋಕ್‌ ವ್ಯಂಗ್ಯ
ಬೆಂಗಳೂರು ನಗರದ “66/11ಕೆ.ವಿ. ಟೆಲಿಕಾಂ” ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಸೆ.19 ರಂದು ಗುರುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ () ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.
ನಗರದ ಹೊಸಹಳ್ಳಿ ಮುಖ್ಯರಸ್ತೆ, ಅರ್ಫತ್ ನಗರ, ಪಾದರಾಯನಪುರ ಪೂರ್ವ ಮತ್ತು ಪಶ್ಚಿಮ, ದೇವರಾಜ ಅರಸ್‌ ನಗರ, ಸುಜಾತಾ ಟೆಂಟ್, ಜೆಜೆಆರ್ ನಗರ, ಹೆರ್ಗೆ ಆಸ್ಪತ್ರೆ, ಸಂಗಮ್ ಸರ್ಕಲ್, ಓಬಳೇಶ್ ಕಾಲೋನಿ, ವಿಎಸ್ ಗಾರ್ಡನ್, ರಾಯಪುರ, ಬಿನ್ನಿ ಪೇಟ್, ಪಾದರಾಯನಪುರ, ಗೋಪಾಲನ್ ಮಾಲ್, ಮೈಸೂರು ರಸ್ತೆ 1ನೇ, 2ನೇ, 3ನೇ ಕ್ರಾಸ್, ಮೋಮಿಂಪುರ, ಜನತಾ ಕಾಲೋನಿ, ಶಮನ ಗಾರ್ಡನ್, ಅರ್ಫತ್ ನಗರ, ರಂಗನಾಥ ಕಾಲೋನಿ, ಹೊಸಹಳ್ಳಿ ಮುಖ್ಯ ರಸ್ತೆ, ಪಾರ್ಕ್‌ ವೆಸ್ಟ್ ಅಪಾರ್ಟ್‌ಮೆಂಟ್ ಬಿನ್ನಿ ಪೇಟೆ, ಅಂಜನಪ್ಪ ಗಾರ್ಡನ್, ದೊರೆಸ್ವಾಮಿ ನಗರ, ಹೂವಿನ ಉದ್ಯಾನ, ಹೊಸ ಪೊಲೀಸ್ ಕ್ವಾರ್ಟಸ್, ಎಸ್‌ಡಿ ಮಠ, ಕಾಟನ್ ಪೆಟ್, ಅಕ್ಕಿಪೇಟೆ, ಬಾಲಾಜಿ ಕಾಂಪ್ಲೆಕ್ಸ್ , ಮನವರ್ತಿ ಪೇಟ್, ಸುಲ್ತಾನ್ ಪೇಟ್, ನಲ್ಬಂಡ್ವಾಡಿ ಎದುರು ಚಿಕ್ಕಪೇಟೆ ಮೆಟ್ರೋ ಸ್ಟೇಷನ್, ಪೊಲೀಸ್ ರಸ್ತೆ, ಟೆಲಿಕಾಂ ಲೇಔಟ್, ಅಂಬೇಡ್ಕರ್ ಲೇಔಟ್, ಲೆಪ್ರಸಿ ಆಸ್ಪತ್ರೆ, ನಾಗಮ್ಮ ನಗರ, ಚೆಲುವಪ್ಪ ಗಾರ್ಡನ್, ಎಸ್‌ಬಿಐ ಕ್ವಾರ್ಟರ‍್ಸ್, ಗೋಪಾಲನ್ ಅಪಾರ್ಟ್‌ಮೆಂಟ್, ಮರಿಯಪ್ಪನ ಪಾಳ್ಯ, ಕೆಪಿ ಅಗ್ರಹಾರ, ಭುವನೇಶ್ವರಿ ನಗರ , ಇಟಿಎ ಅಪಾರ್ಟ್‌ಮೆಂಟ್, ಆರೋಗ್ಯ ಭವನ, ಪ್ರೆಸ್ಟೀಜ್ ವುಡ್ಸ್ ಅಪರ‍್ಟ್‌ಮೆಂಟ್ ಹಂಪಿನಗರ, ವಿಜಯನಗರ, ಟೆಲಿಕಾಂ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದ್ರನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ |  : 24 ಕ್ಯಾರೆಟ್‌ ಗೋಲ್ಡ್ ವಿನ್ಯಾಸದ ಮಣಿಪುರಿ ಉಡುಗೆಯಲ್ಲಿ ಊರ್ವಶಿ ರೌಟಾಲಾ ರ‍್ಯಾಂಪ್‌ ವಾಕ್‌
ಬೆಂಗಳೂರು ನಗರದ “66/11 ಕೆ.ವಿ. ಮಾನ್ಯತಾ ಟೆಕ್ ಪಾರ್ಕ್” ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾರ್ಯಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಸೆ.19 ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ () ಬೆಂಗಳೂರು ಪೂರ್ವ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.
ನಗರದ ಮಾನ್ಯತಾ, ಕಾಫಿ ಬರ‍್ಡ್ ಲೇಔಟ್, ಮರಿಯನಪಾಳ್ಯ, ಮಾನ್ಯತಾ ರೆಸಿಡೆನ್ಸಿ, ಶ್ರೀ ಭಾಗ್ಯಶ್ರೀ ಲೇಔಟ್ ಮತ್ತು ರಾಚೇನಹಳ್ಳಿ, ಐಬ್ರಾಕ್ಸ್, ಅಮರಜ್ಯೋತಿ ಲೇಔಟ್, ಫಾತಿಮಾ ಲೇಔಟ್, ಅಂಜನಾದ್ರಿ ಲೇಔಟ್, ಮಂತ್ರಿ ಲಿಥೋಸ್, ಫಿಡಿಲಿಟಿ, ಫೀಲಿಪ್ಸ್‌, ಇನಕ್ಯುಬೆಟರ್‌, ಐಬಿಎಂ –ಡಿ-1-4 ಬ್ಲಾಕ್‌ , ಎಲ್-6 ಸಿಮೇನ್ಸ್‌, ಬಿ.ಟಿ.ಎಸ್‌. ಲೌಸೆಂಟ್‌, ಚಿರಂಜಿವಿ ಲೇಔಟ್ , ವೆಂಕಟಗೌಡ ಲೇಔಟ್, ಜೆಎನ್‌ಸಿ, ಎಲ್-5 ನೋಕಿಯಾ ಬ್ಲಾಕ್, ಥಣಿಸಂದ್ರ, ಮೆಸ್ತರಿ ಪಾಳ್ಯ, ಮತ್ತು ಜೆಎನ್ಸಿ, ಗೊದ್ರೇಜ್ ಅಪಾರ್ಟ್‌ಮೆಂಟ್, ಬ್ರಿಗೇಡ್ ಕ್ಯಾನಾಡಿಯಂ ಮತ್ತು ಸುತ್ತಮುತ್ತಲಿನ ಪ್ರದೇಶಗಳು.
ಈ ಸುದ್ದಿಯನ್ನೂ ಓದಿ |  : ಟ್ರೇಲರ್‌ನಲ್ಲೇ ಕುತೂಹಲ ಮೂಡಿಸಿದ ಅನು ಪ್ರಭಾಕರ್ ಅಭಿನಯದ ‘ಹಗ್ಗ’ ಚಿತ್ರ
ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.