ರಾಜ್ಯದಲ್ಲಿ63 ಹೊಸ ಪ್ರಕರಣಗಳ ಪತ್ತೆ
ಕರೋನಾ ವೈರಸ್‌ನಿಂದಾಗಿ ರಾಜ್ಯದಲ್ಲಿ ಇದುವರೆಗೂ 31 ಜನ ಸಾವನ್ನಪ್ಪಿದ್ದಾರೆ. ಇದರ ಜೊತೆ ಒಂದು ನಾನ್‌ ಕೋವಿಡ್‌ ಸಾವು ಕೂಡ ಸಂಭವಿಸಿದೆ. ಮಂಗಳವಾರ ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ. ಇದುವರೆಗೂ ಬೆಂಗಳೂರು ನಗರ (7), ಕಲಬುರಗಿ (6), ದಾವಣಗೆರೆ (4), ವಿಜಯಪುರ (3), ದಕ್ಷಿಣ ಕನ್ನಡ (3), ಚಿಕ್ಕಬಳ್ಳಾಪುರ (2), ತುಮಕೂರು (2), ಬಾಗಲಕೋಟೆ, ಬೆಳಗಾವಿ, ಗದಗ, ಬೀದರ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದು, ಒಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ. ಇನ್ನು ಕರೋನಾದಿಂದ 7 ಜನ ಗುಣಮುಖರಾಗಿದ್ದು, ಗುಣಮುಖರಾದವರ ಸಂಖ್ಯೆ 433ಕ್ಕೆ ಏರಿದೆ.