ಯಡಿಯೂರಪ್ಪ ಪುತ್ರಿಗೂ ಕರೋನಾ ಸೋಂಕು
ವಿಶ್ವವಾಣಿ ಸುದ್ದಿಮನೆ ಬೆಂಗಳೂರುಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  ಅವರ ನಂತರ ಅವರ ಪುತ್ರಿಗೂ ಕರೋನಾ ಸೋಂಕು ತಗುಲಿರುವುದು  ವೈದ್ಯಕೀಯ  ಪರೀಕ್ಷೆಯಿಂದ  ಖಚಿತವಾಗಿದೆ.
ಕರೋನಾ ಸೋಂಕಿನ ನಂತರ ಅವರನ್ನೂ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಧಿಕೃತ ಮೂಲಗಳ ಪ್ರಕಾರ,ಮುಖ್ಯಮಂತ್ರಿಯವರಿಗೆ ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಎಂಬ ಕಾರಣಕ್ಕಾಗಿ  ಆಸ್ಪತ್ರೆಗೆ ದಾಖಲಿಸಲಾಯಿತು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಮತ್ತು ಸಿಎಂ ಪುತ್ರ ಬಿ.ಟಿ ವಿಜಯೇಂದ್ರ ಅವರು ಸೋಮವಾರದಂದು ಆಸ್ಪತ್ರೆಗೆ ಭೇಟಿ ನೀಡಿ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ತಂದೆಯವರ ಆರೋಗ್ಯ ಚೆನ್ನಾಗಿದೆ ಯಾರೊಬ್ಬರು  ಆತಂಕಪಡಬೇಕಿಲ್ಲ ಎಂದು ತಿಳಿಸಿದ್ದಾರೆ.