ಬಾಲಕಿಯರ ವಸತಿ ನಿಲಯದ ಅವ್ಯವಸ್ಥೆ: ಶಾಸಕ ಜಿ.ಕರುಣಾಕರರೆಡ್ಡಿ ಅಸಮಾಧಾನ
ಹರಪನಹಳ್ಳಿ:ಪಟ್ಟಣದ ಬಿಇಒ ಕಚೇರಿ ಬಳಿ ಇರುವ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಜಿ.ಕರುಣಾಕರರೆಡ್ಡಿ ಅವರು ಭಾನುವಾರ ಭೇಟಿ ನೀಡಿ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.
ವಸತಿ ನಿಲಯದಲ್ಲಿರುವ ಬಾಲಕಿಯರು ಇಲ್ಲಿ ಊಟ ಸರಿಯಾಗಿ ಇರುವುದಿಲ್ಲ, ರೇಷನ್ ಇದ್ದರೂ ಏನು ಕೊಡು ವುದಿಲ್ಲ, ಶೌಚಾಲಯ ಸ್ವಚ್ಚತೆ ಇಲ್ಲ ಹಾಗೂ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರು ಹೇಳಿದರು. ರೇಷನ್ ಸರಿಯಾಗಿ ಕೊಟ್ಟರೆ ನಾವು ಸರಿಯಾಗಿ ಅಡುಗೆ ಮಾಡುತ್ತೇವೆ. ನಿಗದಿ ಪಡಿಸಿದ ರೇಷನ್ ಕೊಡುತ್ತಾ ಇಲ್ಲ ಎಂದು ಅಡುಗೆ ತಯಾರಕರು ದೂರಿದರು.
ಶೌಚಾಲಯ ವೀಕ್ಷಿಸಿ, ಎಲ್ಲಾ ದೂರನ್ನು ಆಲಿಸಿದ ಶಾಸಕ ಕರುಣಾಕರರೆಡ್ಡಿ ಅವರು ಇಲ್ಲಿಯ ವಾರ್ಡನ್ ಗೀತಮ್ಮನವರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿ ಇನ್ನೊಬ್ಬರಿಗೆ ಜವಾಬ್ದಾರಿ ಕೊಡುವಂತೆ ಬಿಇಒ ಬಸವರಾಜಪ್ಪ ಹಾಗೂ ಶಿಕ್ಷಕಿ ಲತಾ ರಾಥೋಡ್ ಅವರಿಗೆ ಸೂಚಿಸಿದರು.
ಶೌಚಾಲಯವನ್ನು ಸ್ವಚ್ಚಗೊಳಿಸಿ , ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಎಂದು ಪುರಸಭಾ ಮುಖ್ಯಾಽಕಾರಿ ಯವರಿಗೆ ಶಾಸಕರು ಸೂಚಿಸಿದರು.ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್ , ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ನಿಟ್ಟೂರು ಸಣ್ಣಹಾಲಪ್ಪ, ಆರ್ .ಲೋಕೇಶ ಇತರರು ಹಾಜರಿದ್ದರು.