೩೭೦ನೇ ವಿಧಿ ರದ್ದಾಗಬೇಕು ಎಂಬುದು ಉಪಾಧ್ಯಾಯರ ಕನಸಾಗಿತ್ತು: ಮಲ್ಲಿಕಾರ್ಜುನ ಕೀವುಡೆ
ಇಂಡಿ:೩೭೧ನೇ ವಿಧಿರದ್ದಾಗಬೇಕು. ರಾಮ ಮಂದಿರ ನಿರ್ಮಾಣವಾಗಬೇಕು ಜಗತ್ತಿನ ಜಗದ್ಗುರು ಭಾರತ ದೇಶವಾಗಬೇಕು ಎಂಬ ದೀನದಯಾಳ ಉಪಾಧ್ಯಾಯರ ಪಣವಾಗಿತ್ತು ಎಂದು ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ ಹೇಳಿದರು.
ಪಂಡೀತ ದೀನ ದಯಾಳ ಉಪಾಧ್ಯಾಯರ ೧೦೬ನೇ ಜನ್ಮದಿನೋತ್ಸವದಲ್ಲಿ ಮಾತ ನಾಡಿದ ಅವರು ಭಾರತ ಇಂದು ವಿಶ್ವ ದಲ್ಲಿಯೇ ಬಲಾಢ್ಯ ದೇಶವಾಗಿದೆ ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗಟ್ಟಿತನ ಮತ್ತು ದೇಶಪ್ರೇಮ ಕಾರಣ. ಪಂಡೀತ ದೀನದಯಾಳ ಉಪಾಧ್ಯಾಯರ ಕನಸು ಇಡೇರಬೇಕಾದರೆ ೩೭೦ನೇ ವಿಧಿ ರದ್ದಾಗಬೇಕು ಭಾರತ ಜಗತ್ತಿನಲ್ಲಿ ವಿಶ್ವ ಜಗದ್ಗುರುವಾಗಬೇಕು ಎಂಬ ಸಂಕಲ್ಪ ಇತ್ತು ಇಂದು ಪ್ರಧಾನಿ ಗಳು ಅವರ ಆಸೆಯತೆ ಕಾರ್ಯರೂಪಕ್ಕೆ ತಂದು ದೀನಯಾಳ ಉಪಾಧ್ಯಾಯರ ಆತ್ಮಕ್ಕೆ ಶಾಂತಿ ನೀಡಿದ್ದಾರೆ ಇಂತಹ ಮಹಾನ ದಾರ್ಶನಿಕರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.
ಪಂಡೀತ ದಿನದಯಾಳ ಉಪಾಧ್ಯಾಯರ ಸಂಪೂರ್ಣ ಜೀವನ ಚರೀತ್ರೆ ನಡೆದು ಬಂದ ದಾರಿ ಅವರ ದೇಶಕ್ಕಾಗಿ ಬಲಿದಾನ ಏಕಾತ್ಮಕ ಮಾನವತಾವಾದ ದೇಶ ಸರ್ವೋತೋ ಮುಖ ಅಭಿವೃದ್ದಿಯಾಗಬೇಕಾದರೆ ಭಾರತೀಯ ಜನತಾ ಪಾರ್ಟಿಯಿಂದ ಮಾತ್ರ ಸಾಧ್ಯೆವೆಂದು ಒಂದು ಬೀಜ ಎಟ್ಟರೂ ಆ ಬೀಜ ಮೊಳಕೆ ಒಡೆದು ಗಿಡವಾಗಿ ಮರವಾಗಿ ಬೆಳೆದು ಹಣ್ಣು, ನೆರಳು ಕೊಡುವ ಗಿಡ ಅದುವೆ ಭಾರತೀಯ ಜನತಾ ಪಕ್ಷ . ಪಕ್ಷದ ಧೋರಣೆ ಒಂದೇ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ಕಾ ವಿಶ್ವಾಸ್ ಎಂದು ಪ್ರೋ.ಸಿದ್ದಲಿಂಗ ಹಂಜಗಿ ಉಪನ್ಯಾಸ ನೀಡಿದರು.
ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ,ದಯಾಸಾಗರ ಪಾಟೀಲ, ಶೀಲವಂತ ಉಮರಾಣಿ, ಮುತ್ತು ದೇಸಾಯಿ,ಅನೀಲ ಜಮಾದಾರ, ಪುಟ್ಟುಗೌಡ ಪಾಟೀಲ,ರಮೇಶ ಧರೇನವರ್,ಅನೀಲಗೌಡ ಬಿರಾದಾರ, ರಾಜಕುಮಾರ ಸಗಾಯಿ, ಭೀಮಸಿಂಗ ರಾಠೋಡ, ಬುದ್ದುಗೌಡ ಪಾಟೀಲ, ಸೋಮು ನಿಂಬರಗಿಮಠ, ಶಾಂತು ಕಂಬಾರ, ಶರಣು ಬಂಡಿ, ಕಾಶಿನಾಥ ನಾಯ್ಕೋಡಿ, ಸಿದ್ದಣ್ಣಾ ಶಿವೋರ, ಮಲ್ಲು ವಾಲೀಕಾರ, ವಿಜಯಲಕ್ಷಿ ರೂಗಿಮಠ, ಗುರುದೇವಿ ತರಡಿ ಪುರಸಭೆ ಸದಸ್ಯರು ಇಂತರೆ ಭಾಜಪ ಮುಖಂಡರು ಇದ್ದರು.