ಶರಣರ ಸಂದೇಶ ಅಕ್ಕಮಹಾದೇವಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟನೆ
ಇಂಡಿ:ತಾಲೂಕಾ ಮಹಿಳಾ ಕದಳಿ ವೇದಿಕೆ ಇಂಡಿ , ಮನೆ ಮನೆಗಳಲ್ಲಿ ಶರಣರ ಸಂದೇಶ ಅಕ್ಕಮಹಾದೇವಿ ಜಯಂತ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮವನ್ನು ಶ್ರೀಮತಿ ಭಾರತಿ ಶಂಕರಗೌಡ ಪಾಟೀಲ ಉದ್ಘಾ ಟಿಸಿದರು.
೧೨ನೇ ಶತಮಾನ ಶರಣ ಸಂತತಿಯ ಕ್ರಾಂತಿಕಾರಕ ಹಾಗೂ ಅಧ್ಯಾತ್ಮಿಕ ,ಧಾರ್ಮಿಕ ಪ್ರವರ್ತಕರ ಯುಗ ಎಂದರೆ ತಪ್ಪಾಗುವುದಿಲ್ಲ .ಅಕ್ಕಮಹಾದೇವಿ ಕನ್ನಡದ ಪ್ರಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿ ಶರಣ ಚಳುವಳಿಯ ಪ್ರಮುಖ ಸ್ವಾಭಿಮಾನದ ಪ್ರತೀಕ ಸ್ತ್ರೀವಾದಿ ಚಳುವಳಿ ಯ ನಿಜವಾದ ಪ್ರತಿಪಾದಕಿ, ಅಕ್ಕರೆಯ ಅಕ್ಕನಾಗಿ ಚಿಕ್ಕವಯಸ್ಸಿನಲ್ಲಿಯೇ ವೈರಾಗ್ಯ ತಾಳಿ ಸುಖ; ಸಂಪತ್ತು ರಾಜವೈಭೋಗ ಬಿಟ್ಟು ಅನೇಕ ಸತ್ವ ಪರೀಕ್ಷೆ ಗಳನ್ನು ಏದುರಿಸಿದ ಶಿವಶರಣೆ.
ಅಕ್ಕಮಹಾದೇವಿ ಬೆತ್ತಲೆಯಾಗಿ ಕೇಶ ರಾಶಿಯಿಂದ ಮೈಮುಚ್ಚಿಕೊಂಡು ಹೊರಟಾಗ ಅನೇಕ ತೊಂದರೆ ಎದುರಿಸಿದನ್ನು ತಮ್ಮ ವಚನಗಳ ಮೂಲಕ ವಿವರಿಸಿದ್ದಾಳೆ. ಸಮುದ್ರ ತೀರದಲ್ಲಿ ಮನೆ ಮಾಡಿ ನೊರೆ ತೊರೆ ಗಳಿಗಂಜಿದೊಡೆಯ0ತಯ್ಯಾ , ಬೆಟ್ಟದಾಮೇಲ್ಲೋಂದು ಮನೆಯ ಮಾಡಿ ಹುಲಿ-ಕರಡಿಗಳಿಗಂಜಿದಡೆಯ೦ತಯ್ಯಾ ಹೀಗೆ ಸುತ್ತಿ ನಿಂದನೆಗಳು ಬಂದರೂ ಸಹ ಸಮಾಧಾನ ಇರಬೇಕು ಎಂದು ಹೇಳಿ, ಚನ್ನಮಲ್ಲಿ ಕಾರ್ಜುನನೆ ಪತಿ ಎಂದು ವೈರಾಗ್ಯ ತಾಳಿದ ಶರಣರಲ್ಲಿ ಶ್ರೇಷ್ಠ ಶರಣೆ ಇಂತಹ ಶರಣ -ಸಂತರ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ಸ.ಪ್ರೌ ಶಾಲೆ ಕಂಪನಿ೦ಬರಗಿ ಮುಖ್ಯ ಗುರುಮಾತೆ ಕಮಲಾ ಗೆಜ್ಜೆ ಉಪನ್ಯಾಸ ನೀಡಿದರು.
ಮಾಜಿ ಜಿ.ಪಂ ಸದಸ್ಯ ಶ್ರೀಮತಿ ಪ್ರಭಾವತಿ ಅಪ್ಪುಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಗಲಗಲಿ ಆಶೇಯ ನುಡಿಗಳಾಡಿದರು. ಆರ್.ವ್ಹಿ ಪಾಟೀಲ, ವಿಜಯಲಕ್ಷ್ಮೀ ದೇಸಾಯಿ, ರಾಜೇಶ್ರೀ ಕ್ಷತ್ರಿ, ಶಶೀಕಲಾ ಮಧಭಾವಿ, ಸುಮಂಗಲಾ ನಿಂಬಾಳ, ನಿರ್ಮಲಾ ತೇಲಿ, ಭವಾನಿ ಗುಳೇದಗುಡ್ಡ, ರೇಣುಕಾ ಸಂಖ, ಜಯಶ್ರೀ ಬಿರಾದಾರ, ಶಶಿಕಲಾ ಬೆಟಗೇರಿ, ಬಸಮ್ಮಾ ಪೊಲೀಸ್‌ಪಾಟೀಲ, ಸಂಗೀತಾ ಡೋಳ್ಳಿನ,ಪಾರ್ವತಿ ದಳವಾಯಿ, ಮಾದೇವಿ ತಳವಾರ, ನಿಲಯ ಮೇಲ್ವೀಚಾರಕ ಎಸ್,ಎಸ್ ಸುಗೂರ ಸೇರಿದಂತೆ ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.
ಚಂದ್ರಕಲಾ ಕಾಳಗಿ, ಜಯಶ್ರೀ ಹೂಗಾರ ಇವರಿಗೆ ಸನ್ಮಾನಿಸಲಾಯಿತು.