 : ʻಇನ್ನು ಮುಂದೆ ಭಯ ಪಡಲ್ಲ..ʼ ಪ್ರಧಾನಿ ಮೋದಿ ವಿರುದ್ಧ ರಾಹುಲ್‌ ಮತ್ತೆ ಕಿಡಿ
ವರ್ಜೀನಿಯಾ: ಅಮೆರಿಕ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ( ) ಮತ್ತೆ ಪ್ರಧಾನಿ ನರೇಂದ್ರ ಮೋದಿ(  ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಜನರಲ್ಲಿ “ಪ್ರಧಾನಿ ನರೇಂದ್ರ ಮೋದಿಯವರ ಭಯ” ಮಾಯವಾಗಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಯುಎಸ್‌ನ ವರ್ಜೀನಿಯಾದ ಹೆರ್ಂಡನ್‌ನಲ್ಲಿ ಭಾರತೀಯ ಡಯಾಸ್ಪೊರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಪಿಎಂ ನರೇಂದ್ರ ಮೋದಿ ಅವರು ಸಣ್ಣ ಉದ್ಯಮಗಳ ಮೇಲೆ ಏಜೆನ್ಸಿಗಳ “ತುಂಬಾ ಭಯ ಮತ್ತು ಒತ್ತಡ” ವನ್ನು ಹೇರಿದ್ದರು. ಆದರೆ ಎಲ್ಲವೂ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು ಎಂದು ಹೇಳಿದ್ದಾರೆ.
“ಚುನಾವಣೆ ನಂತರ ಏನೋ ಬದಲಾಗಿದೆ. ಕೆಲವರು ‘ಡರ್‌ ನಹೀ ಲಗ್ತಾ ಅಬ್, ಡರ್‌ ನಿಕಲ್ ಗಯಾ ಅಬ್’ (ನಮಗೆ ಇನ್ನು ಭಯವಿಲ್ಲ, ಭಯ ಈಗ ಹೋಗಿದೆ) ಎಂದರು. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ತುಂಬಾ ಭಯವನ್ನು ಹರಡಿದರು ಮತ್ತು ಸಣ್ಣ ಉದ್ಯಮಗಳ ಮೇಲೆ ಏಜೆನ್ಸಿಗಳ ಒತ್ತಡವು ಸೆಕೆಂಡುಗಳಲ್ಲಿ ಕಣ್ಮರೆಯಾಯಿತು ಎಂಬುದು ನನಗೆ ಆಸಕ್ತಿದಾಯಕವಾಗಿದೆ. ಅವರು ಈ ಭಯವನ್ನು ಹರಡಲು ವರ್ಷಗಳನ್ನು ತೆಗೆದುಕೊಂಡರು ಮತ್ತು ಕೆಲವೇ ಸೆಕೆಂಡುಗಳಲ್ಲಿ ಕಣ್ಮರೆಯಾಯಿತು ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ, ನಾನು ಪ್ರಧಾನ ಮಂತ್ರಿಯನ್ನು ನೇರವಾಗಿ ನೋಡುತ್ತೇನೆ ಮತ್ತು ಮೋದಿಯವರ ಕಲ್ಪನೆ, 56 ಇಂಚಿನ ಎದೆ, ದೇವರೊಂದಿಗೆ ನೇರ ಸಂಪರ್ಕ, ಅದೆಲ್ಲವೂ ಈಗ ಮುಗಿದು ಹೋದ ಕತೆ. “ಬಿಜೆಪಿಗೆ ಈ ದೇಶ ಎಲ್ಲರದ್ದು… ಭಾರತ ಒಂದು ಒಕ್ಕೂಟ ಎಂದು ಅರ್ಥವಾಗುತ್ತಿಲ್ಲ. ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ.
#| , , :         , "… '       …   .   ,    …        , ,   …../AuV3wuKO3H
ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ರಾಹುಲ್‌, ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು, ನಂತರ ವರ್ಜೀನಿಯಾದಲ್ಲಿ ಡಯಾಸ್ಪೊರಾ ಕಾರ್ಯಕ್ರಮವನ್ನು ನಡೆಸಿದರು. ದೆಹಲಿಗೆ ತೆರಳುವ ಮೊದಲು ರಾಹುಲ್ ಗಾಂಧಿ ವಾಷಿಂಗ್ಟನ್‌ನಲ್ಲಿ ಎರಡು ದಿನಗಳ ಕಾಲ ಇರುತ್ತಾರೆ.
ಇನ್ನು ನಿನ್ನೆ ಟೆಕ್ಸಾಸ್‌ನಲ್ಲಿ ಭಾರತೀಯ ಅಮೇರಿಕನ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ(  ), ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ () ವನ್ನು ಟೀಕಿಸಿದ್ದರು. ಭಾರತೀಯ ರಾಜಕೀಯದಲ್ಲಿ ಪ್ರೀತಿ, ಗೌರವ ಮತ್ತು ನಮ್ರತೆ ಕಾಣೆಯಾಗಿದೆ. ಇದಕ್ಕೆ ಮೂಲ ಕಾರಣ ಆರ್‌ಎಸ್‌ಎಸ್‌() ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: : ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಅಮೆರಿಕದಲ್ಲಿ ರಾಹುಲ್‌ ಆಕ್ರೋಶ; ದೇಶದ್ರೋಹಿಗಳಿಗೆ ಇದೆಲ್ಲಾ ಅರ್ಥ ಆಗಲ್ಲ ಎಂದು ಬಿಜೆಪಿ ತಿರುಗೇಟು