  : ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಕನ್ನಡಿಗ ಸುಹಾಸ್‌ ಯತಿರಾಜ್‌
ಬೆಂಗಳೂರು:ಪ್ಯಾರಿಸ್‌ನಲ್ಲಿ ನಡೆಯತ್ತಿರುವ  ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌  ಎಸ್ಎಲ್ 4 ವಿಭಾಗದಲ್ಲಿ ಕರ್ನಾಟಕದ ಮೂಲದ ಐಎಎಸ್‌ ಅಧಿಕಾರಿ ಸುಹಾಸ್ ಯತಿರಾಜ್ (  ) ಸತತ ಎರಡನೇ ಬೆಳ್ಳಿ ಪದಕ ಗೆದ್ದಿದ್ದಾರೆ. ಸುಹಾಸ್ ಸ್ಥಳೀಯ ಆಟಗಾರ  ಲ್ಯೂಕಾಸ್ ಮಜೂರ್ ವಿರುದ್ಧ 9-21, 13-21 ಅಂತರದಲ್ಲಿ ಸೋತರು. ಆದಾಗ್ಯೂ ಅವರು ಭಾರತದ ಕ್ರೀಡಾಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಅವರು ಒಲಿಂಪಿಕ್ಸ್‌  ಬ್ಯಾಡ್ಮಿಂಟನ್‌ನಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೊದಲ ಪುರುಷ ಷಟ್ಲರ್‌ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದವರಾಗಿರುವ ಸುಹಾಸ್‌ ಅವರು  2021ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಉತ್ತರ ಪ್ರದೇಶ ಕೇಡರ್‌ನ  2007ರ ಬ್ಯಾಚ್‌ನ  ಐಎಎಸ್ ಅಧಿಕಾರಿಯಾಗಿರುವ ಅವರು ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಗ್ರ ಶ್ರೇಯಾಂಕದ ಸುಹಾಸ್ ಅವರು ಇಂಡೋನೇಷ್ಯಾದ ಹಿಕ್ಮತ್ ರಾಮ್ದಾನಿ ಅವರನ್ನು 21-7, 21-5 ಮತ್ತು ನಂತರ ದಕ್ಷಿಣ ಕೊರಿಯಾದ ಶಿನ್ ಕ್ಯುಂಗ್-ಹ್ವಾನ್ ಅವರನ್ನು 26-24, 21-14 ರಿಂದ ಸೋಲಿಸಿ ಸೆಮಿಫೈನಲ್‌ಗೆ  ಪ್ರವೇಶಿಸಿದ್ದರು.
ಸೆಮಿಫೈನಲ್‌ನಲ್ಲಿ ಅವರು ಭಾರತದ ಸುಕಾಂತ್ ಕದಮ್ ಅವರನ್ನು 21-17, 21-12ರಿಂದ ಸೋಲಿಸಿದ್ದರು.
ಮಹಿಳೆಯ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಗೆದ್ದ ತುಳಸಿಮತಿ
ಭಾರತದ ಪ್ಯಾರಾ ಅಥ್ಲೀಟ್‌ ತುಳಸಿಮತಿ ಮುರುಗೇಶನ್ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್‌ಯು5  ವಿಭಾಗದ ಫೈನಲ್‌ನಲ್ಲಿ ಚೀನಾದ ಯಾಂಗ್ ಕ್ವಿಕ್ಸಿಯಾ ವಿರುದ್ಧ ಸೋತು ಬೆಳ್ಳಿ ಪದಕ ಗೆದ್ದಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಪಂದ್ಯದಲ್ಲಿ ಯಾಂಗ್ 21-17, 21-10 ಅಂತರದಲ್ಲಿ ಗೆದ್ದು 30ನಿಮಿಷಗಳಲ್ಲಿ ಆಟ ಮುಗಿಸಿದರು. ಭಾರತದವೇ ಆದ ಮನೀಷಾ ರಾಮದಾಸ್ ಅವರನ್ನು ಸೋಲಿಸಿದ ನಂತರ ತುಳಸಿಮತಿ ಮಹಿಳಾ ಬ್ಯಾಡ್ಮಿಂಟನ್ ಸ್ಪರ್ಧೆಯ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೊದಲ ಗೇಮ್ ನಲ್ಲಿ ಇಬ್ಬರೂ ಆಟಗಾರ್ತಿಯರು 4-4ರ ಸಮಬಲ ಸಾಧಿಸಿದರು. ಬಳಿಕ ತುಳಸಿಮತಿ 2 ಅಂಕಗಳ ಮುನ್ನಡೆ  ಸಾಧಿಸಿದರು. ಮೊದಲ ಗೇಮ್ ನ ವಿರಾಮದ ವೇಳೆ  ತುಳಸಿಮತಿ 11-8ರ ಮುನ್ನಡೆ ಸಾಧಿಸಿದರು.  ನಂತರ ಯಾಂಗ್ ಮುನ್ನಡೆಯನ್ನು ಒಂದು ಹಂತಕ್ಕೆ ಇಳಿಸಿಕೊಂಡರು.  ಅಲ್ಲದೆ ಯಾಂಗ್ ಅದ್ಭುತ ಪುನರಾಗಮನ ಮಾಡಿದರು.   ಅಲ್ಲದೆ, ಚೀನಾದ ತಾರೆ ಕೇವಲ 16 ನಿಮಿಷಗಳಲ್ಲಿ 21-17 ಗೆಲುವು ದಾಖಲಿಸಿದರು.
ಇದನ್ನೂ ಓದಿ: 2024 : ಪ್ಯಾರಾಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದ ಮನೀಷಾ ರಾಮ್‌ದಾಸ್‌
ಎರಡನೇ ಗೇಮ್ ನಲ್ಲಿ ಯಾಂಗ್ ಉತ್ತಮ ಆರಂಭ ಪಡೆದರೂ ತುಳಸಿಮತಿ 3-3ರ ಮುನ್ನಡೆ ಸಾಧಿಸಿದರು. ಆದಾಗ್ಯೂ ಹಾಲಿ ಚಾಂಪಿಯನ್ ಮುನ್ನಡೆ ಪಡೆದರು. ಹೀಗಾಗಿ ತುಳಸಿಮತಿ 11-5ರಿಂದ ಹಿನ್ನಡೆ ಅನುಭವಿಸಿದರು. ಯಾಂಗ್ 15-9 ಮುನ್ನಡೆ ಸಾಧಿಸಿದರು. 17-9ರ ಮುನ್ನಡೆ ಸಾಧಿಸಿದ್ದರಿಂದ ತುಳಸಿಮತಿ ಅವರನ್ನು ಅನಗತ್ಯ ತಪ್ಪುಗಳು ಮಾಡಿದಿರು.
