  : ಬಾಂಗ್ಲಾದೇಶ ಸರಣಿಗಾಗಿ ಅಭ್ಯಾಸ ಆರಂಭಿಸಿದ ಜಸ್‌ಪ್ರಿತ್‌ ಬುಮ್ರಾ, ಇಲ್ಲಿದೆ ವಿಡಿಯೊ
ಬೆಂಗಳೂರು :ಭಾರತದ ಏಕದಿನ ಟಿ 20 ವಿಶ್ವಕಪ್ (T20  ) ಅಭಿಯಾನದ ಬಳಿಕ ದೀರ್ಘ ಕಾಲದ ವಿರಾಮ ಪಡೆದಿರುವ ವೇಗದ ಬೌಲರ್‌  ಜಸ್ಪ್ರೀತ್ ಬುಮ್ರಾ ( ) ಬಾಂಗ್ಲಾದೇಶ ವಿರುದ್ಧದ ನಿರ್ಣಾಯಕ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಅವರು ದೀರ್ಘ ವಿಶ್ರಾಂತಿ ಅವಧಿಯಲ್ಲಿದ್ದ ಕಾರಣ ಹಾಗೂ  ಕೆಲವು ಸಮಯದಿಂದ ಕ್ರಿಕೆಟ್‌ ಮೈದಾನದಿಂದ ಹೊರಗುಳಿದಿದ್ದರು. ಹೀಗಾಗಿ ಮತ್ತೊಂದು ಬಾರಿ ತರಬೇತಿಗೆ ಮರಳಿದ್ದಾರೆ.
ವೈರಲ್ ಆಗಿರುವ ಇತ್ತೀಚಿನ ವೀಡಿಯೊದಲ್ಲಿ ಅವರು ತಮ್ಮ  ಉತ್ಸಾಹದಿಂದ ಬೌಲಿಂಗ್‌ ಅಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ಅವರು ಉತ್ತಮ  ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಈ ವಿಡಿಯೊ ಅಭಿಮಾನಿಗಳನ್ನು ಉತ್ಸಾಹ ಹೆಚ್ಚಿಸಿದೆ.  ಏಕೆಂದರೆ ಬುಮ್ರಾ ಫಾರ್ಮ್‌ಗೆ  ಮರಳುವುದು ಭಾರತದ ಮುಂಬರುವ ಸವಾಲುಗಳಿಗೆ ವಿಶೇಷವಾಗಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಪೂರಕ ವಿಷಯವಾಗಿದೆ.
ಬಾಂಗ್ಲಾದೇಶ ವಿರುದ್ಧ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುವ ಸಾಧ್ಯತೆ
2024 ರ ಟಿ 20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ನಂತರ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕ್ರಿಕೆಟ್‌ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ.  ಜಿಂಬಾಬ್ವೆ ಪ್ರವಾಸ ಹಾಗೂ ಲಂಕಾ ಪ್ರವಾಸದ ತಂಡದಲ್ಲಿ ಅವರು ಅವಕಾಶ ಗಿಟ್ಟಿಸಿಕೊಂಡಿರಲಿಲ್ಲ. ಅವರು ಉತ್ತಮ ಹಾಗೂ ಫಿಟ್‌ ಆಗಿರಲು ಬುಮ್ರಾ ಅವರಿಗೆ ಜಿಂಬಾಬ್ವೆ ಮತ್ತು ಶ್ರೀಲಂಕಾ ಪ್ರವಾಸಗಳಿಗೆ ವಿಶ್ರಾಂತಿ ನೀಡಲಾಗಿತ್ತು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಬಾರ್ಡರ್ ಗವಾಸ್ಕರ್ ಟ್ರೋಫಿ (ಬಿಜಿಟಿ) ಗೆ ಅವರು ಹೆಚ್ಚು ಫ್ರೆಶ್‌ ಆಗಿರಲು ಅವರ ಕೆಲಸದ ಹೊರೆಯನ್ನುಕಡಿಮೆ ಮಾಡಲಾಗಿತ್ತು. ಇದೀಗ ಅವರ ಕುಟುಂಬದ ಜತೆ ಉತ್ತಮ ಸಮಯವನ್ನು ಕಳೆದ ಬಳಿಕ ಆಟಕ್ಕೆ ಮರಳಿದ್ದಾರೆ.
ಈ ಸುದ್ದಿಯನ್ನೂ ಓದಿ :   : ಟೆಸ್ಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಕ್ಲೀನ್‌ ಸ್ವೀಪ್‌ ಮಾಡಿ ಚರಿತ್ರೆ ಬರೆದ ಬಾಂಗ್ಲಾದೇಶ
ಸ್ಟಾರ್‌ ಬೌಲರ್ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಗಳಲ್ಲಿ ಮರಳುವ ನಿರೀಕ್ಷೆಯಿದೆ. ಅಲ್ಲಿ ಭಾರತವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಲು ಗೆಲುವಿನ ಅಭಿಯಾನ ನಡೆಸಲಿದೆ. ಹೀಗಾಗಿ ಬುಮ್ರಾ  ಉಪಸ್ಥಿತಿ ನಿರ್ಣಾಯಕ.
ದುಲೀಪ್ ಟ್ರೋಫಿ ಸೆಪ್ಟೆಂಬರ್ 5, 2024 ರಂದು ಆಂಧ್ರಪ್ರದೇಶದ ಅನಂತಪುರ ಮತ್ತು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಕೆಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.  ಪಂದ್ಯಾವಳಿಯಲ್ಲಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ಅವರಂತಹ ಪ್ರಮುಖ ಕ್ರಿಕೆಟಿಗರು ಇದ್ದಾರೆ, ಇದು ದುಲೀಪ್ ಟ್ರೋಫಿಯನ್ನು ಮಹತ್ವದ ಘಟನೆಯಾಗಿ ಉಳಿದಿದೆ ಎಂದು ಖಚಿತಪಡಿಸುತ್ತದೆ.