ಉದ್ಯಮಿ ರತನ್ ಟಾಟಾಗೆ ‘ಅಸ್ಸಾಂ ಭೈಭವ್’ ಪ್ರಶಸ್ತಿ ಪ್ರಧಾನ
ನವದೆಹಲಿ:ಟಾಟಾ ಟ್ರಸ್ಟ್‌ನ ಅಧ್ಯಕ್ಷರು, ಉದ್ಯಮಿ ರತನ್ ಟಾಟಾ ಅವರಿಗೆ  ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತ್ಯುನ್ನತ ಪ್ರಶಸ್ತಿಯಾದ ‘ಅಸ್ಸಾಂ ಭೈಭವ್’ ನೀಡಿ ಗೌರವಿಸಿದ್ದಾರೆ.
ಮುಂಬೈನ ಕೊಲಾಬಾದಲ್ಲಿ ಕಾರ್ಯಕ್ರಮ ನಡೆದಿದ್ದು, ಅಸ್ಸಾಂನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ರತನ್ ಟಾಟಾ ನೀಡಿರುವ ಅಮೋಘ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಫಲಕ, ಐದು ಲಕ್ಷ ರೂ. ನಗದು ಮೊತ್ತ ಹಾಗೂ ಪದಕ ನೀಡಿ ಗೌರವಿಸಲಾಗಿದೆ. ಉದ್ಯಮಿಯಾಗಿ, ದಾನಿಯಾಗಿ ರತನ್ ಟಾಟಾ ಅವರು ಅಸ್ಸಾಂ ನಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.