ಭಾರತವು ಹೆಚ್ಚು ಹಾಲನ್ನ ಉತ್ಪಾದಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ಬನಸ್ಕಾಂತ:ಗೋಧಿ ಮತ್ತು ಅಕ್ಕಿ ವ್ಯಾಪಾರಕ್ಕಿಂತ ಭಾರತವು ಹೆಚ್ಚು ಹಾಲನ್ನ ಉತ್ಪಾದಿಸುತ್ತಿದೆ. ಹೀಗಾಗಿ ಸಣ್ಣ ರೈತರು ಎಂದರೆ, ಹೈನುಗಾರಿಕೆ ಕ್ಷೇತ್ರದ ಅತಿದೊಡ್ಡ ಫಲಾನುಭವಿಗಳಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.
ಬನಸ್ಕಾಂತ ಜಿಲ್ಲೆಯ ದಿಯೋದರ್ʼನಲ್ಲಿ ಹೈನುಗಾರಿಕೆ ಸಂಕೀರ್ಣ ಮತ್ತು ಬನಾಸ್ ಡೈರಿಯನ್ನ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಭಾರತವು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾ ಗಿದ್ದು, ಕೋಟ್ಯಂತರ ರೈತರ ಜೀವನೋಪಾಯವು ಇದರ ಮೇಲೆ ಅವಲಂಬಿತವಾದಾಗ, ವಾರ್ಷಿಕವಾಗಿ 8.5 ಲಕ್ಷ ಕೋಟಿ ರೂ.ಗಳ ಮೌಲ್ಯದ ಹಾಲನ್ನ ಉತ್ಪಾದಿಸುತ್ತದೆ. ಅದರ ಬಗ್ಗೆ ಅನೇಕ ಜನರು ಗಮನ ಹರಿಸುವುದಿಲ್ಲ ಎಂದು ಹೇಳಿದರು.
ಗೋಧಿ ಮತ್ತು ಅಕ್ಕಿಯ ವಹಿವಾಟು ಸಹ 8.5 ಲಕ್ಷ ಕೋಟಿ ರೂ.ಗೆ ಸಮನಾಗಿಲ್ಲ. ಸಣ್ಣ ರೈತರು ಹೈನುಗಾರಿಕೆ ಕ್ಷೇತ್ರದ ಅತಿದೊಡ್ಡ ಫಲಾನುಭವಿ ಗಳಾಗಿದ್ದಾರೆ. ಬನಾಸ್ ಡೈರಿಯ ಹೊಸ ಡೈರಿ ಸಂಕೀರ್ಣ ಮತ್ತು ಆಲೂಗಡ್ಡೆ ಸಂಸ್ಕರಣಾ ಘಟಕವು ಸ್ಥಳೀಯ ರೈತರನ್ನ ಸಬಲೀಕರಣಗೊಳಿಸುವ ಮತ್ತು ಈ ಪ್ರದೇಶದ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪ್ರಧಾನಮಂತ್ರಿಯವರು ಬನಾಸ್ ಸಮುದಾಯ ರೇಡಿಯೋ ಸ್ಟೇಷನ್ ಮತ್ತು ಪಾಲನ್ ಪುರದಲ್ಲಿ ಚೀಸ್ ಉತ್ಪನ್ನಗಳು ಮತ್ತು ವೀ ಪೌಡರ್ ಉತ್ಪಾದನೆ ಮತ್ತು ದಮಾದಲ್ಲಿ ಸ್ಥಾಪಿಸಲಾದ ಸಾವಯವ ಗೊಬ್ಬರ ಮತ್ತು ಜೈವಿಕ ಅನಿಲ ಸ್ಥಾವರಗಳ ಉತ್ಪಾದನೆಗೆ ವಿಸ್ತೃತ ಸೌಲಭ್ಯಗಳನ್ನ ರಾಷ್ಟ್ರಕ್ಕೆ ಸಮರ್ಪಿಸಿ ದರು.