   : ಸರ್ಕಾರ ರಚಿಸಿದ 1 ಗಂಟೆಯೊಳಗೆ ಮದ್ಯ ನಿಷೇಧ ವಾಪಸ್‌; ಪ್ರಶಾಂತ್ ಕಿಶೋರ್  ಭರವಸೆ
ನವದೆಹಲಿ:ತಮ್ಮ ಜನಸೂರಜ್ ಪಕ್ಷವು ಬಿಹಾರದ ವಿಧಾನಸಭಾ ಚುನಾವಣೆ ಗೆದ್ದು ಮುಂದಿನ ಸರ್ಕಾರವನ್ನು ರಚಿಸಿದರೆ ಕೇವಲ ಒಂದು ಗಂಟೆಯೊಳಗೆ ಬಿಹಾರದಲ್ಲಿ ಜಾರಿಯಲ್ಲಿರುವ ಮದ್ಯ ನಿಷೇಧವನ್ನು (  ) ಆದೇಶವನ್ನು ತೆಗೆದುಹಾಕುವುದಾಗಿ ಚುನಾವಣಾ ತಂತ್ರಜ್ಞ ಮತ್ತು ರಾಜಕಾರಣಿ ಪ್ರಶಾಂತ್ ಕಿಶೋರ್ ಶನಿವಾರ ಭರವಸೆ ನೀಡಿದ್ದಾರೆ.
प्रशांत किशोर का बड़ा दावा: सरकार बनती है तो एक घंटा के भीतर शराबबंदी खत्म कर देंगे. सिर्फ शराब की दुकानें बंद हुई हैं होम डिलीवरी चालू है.@##../jAp1WV294h
ಅಕ್ಟೋಬರ್ 2 ರಂದು ತಮ್ಮ ಪಕ್ಷದ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ವಿಶೇಷ ಯೋಜನೆಗಳ ಬಗ್ಗೆ ಕೇಳಿದಾಗ, “ಕಾರ್ಯಕ್ರಮಕ್ಕೆ ಯಾವುದೇ ವಿಶೇಷ ಸಿದ್ಧತೆಯ ಅಗತ್ಯವಿಲ್ಲ. ನಾವು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದೇವೆ. ಜನ್ ಸೂರಜ್ ಸರ್ಕಾರ ರಚನೆಯಾದರೆ, ನಾವು ಒಂದು ಗಂಟೆಯೊಳಗೆ ಮದ್ಯ ನಿಷೇಧ ಮಾಡುವ ಗುರಿ ಹೊಂದಿದ್ದೇವೆ ” ಎಂದು ಅವರು ಹೇಳಿದರು.
ಅಸ್ತಿತ್ವದಲ್ಲಿರುವ ನಿಷೇಧವನ್ನು “ನಕಲಿ ಆದೇಶ ” ಎಂದು ಹೇಳಿದ ಅವರು, ರಾಜ್ಯವು ಪ್ರತಿವರ್ಷ ಸುಮಾರು 20,000 ಕೋಟಿ ರೂ.ಗಳ ನಷ್ಟ ಅನುಭವಿಸುತ್ತಿದೆ. ಆದರೆ ಮದ್ಯ ಮಾಫಿಯಾ ಮತ್ತು ಅಧಿಕಾರಿಗಳು ಅಕ್ರಮ ವ್ಯಾಪಾರದಿಂದ ಹಣ ಗಳಿಸುತ್ತಲೇ ಇದ್ದಾರೆ ಎಂದು ಹೇಳಿದರು.
ತಮ್ಮ ನಿರ್ಧಾರದಿಂದ ಮಹಿಳಾ ಮತ ಬ್ಯಾಂಕ್ ಕಳೆದುಕೊಳ್ಳುವ ಭಯವಿಲ್ಲ ಎಂದೂ  ಹೇಳಿದರು. “ನಾನು ಮಹಿಳೆಯರ ಮತವನ್ನು ಪಡೆಯಲಿ ಅಥವಾ ಪಡೆಯದಿರಲಿ, ನಾನು ಮದ್ಯ ನಿಷೇಧದ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇನೆ ಏಕೆಂದರೆ ಅದು ಬಿಹಾರದ ಹಿತದೃಷ್ಟಿಯಿಂದ ಮಾಡಿದ ಆದೇಶವಲ್ಲ ” ಎಂದು ಅವರು ಹೇಳಿದರು.
ಇದನ್ನೂ ಓದಿ: : ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಅರವಿಂದ್‌ ಕೇಜ್ರಿವಾಲ್‌
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2016ರಿಂದ ಬಿಹಾರದಲ್ಲಿ ಜಾರಿಗೆ ತಂದಿರುವ ಸಂಪೂರ್ಣ ಮದ್ಯ ನಿಷೇಧದ ಬಗ್ಗೆ ಕಿಶೋರ್ ತಮ್ಮ ಟೀಕೆ ಮಾಡಿದ್ದಾರೆ. ಈ ನಿರ್ಧಾರ ನಾಗರಿಕರ ಸಾವು ಮತ್ತು ಮೆಥನಾಲ್ ಮಿಶ್ರಿತ ಮದ್ಯ ಕುಡಿಯುವಂತೆ ಮಾಡಿದೆ.  ನಕಲಿ ಮದ್ಯವನ್ನು ನಿಯಂತ್ರಿಸಲು ಅಸಮರ್ಥತೆಗಾಗಿ ಈ ನೀತಿ ಯಶಸ್ವಿ ಎನಿಸಲ್ಲ ಎಂದು ಹೇಳಿದ್ದಾರೆ.
ತೇಜಸ್ವಿ ಯಾದವ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಬಿಹಾರದ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ಕಿಶೋರ್ ಟೀಕಿಸಿದರು. ಉಭಯ ನಾಯಕರ ನಡುವೆ ನಡೆಯುತ್ತಿರುವ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ವಿಷಯವು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ನಡುವಿದ್ದು. ಇವೆರಡೂ ಬಿಹಾರಕ್ಕೆ ಹಾನಿಯನ್ನುಂಟು ಮಾಡಿವೆ. ಬಿಹಾರದ ಜನರು 30 ವರ್ಷಗಳಿಂದ ಇವೆರಡನ್ನೂ ನೋಡಿದ್ದಾರೆ. ನಾವು ಅವರಿಬ್ಬರನ್ನೂ ಬಿಹಾರವನ್ನು ತೊರೆಯುವಂತೆ ಒತ್ತಾಯಿಸುತ್ತಿದ್ದೇವೆ” ಎಂದು ಹೇಳಿದರು.