ಭೂ ಕುಸಿತ: ಮೃತರ ಸಂಖ್ಯೆ 24ಕ್ಕೆ ಏರಿಕೆ
ಇಂಫಾಲ್:ಮಣಿಪುರದ ನೋನೆ ಜಿಲ್ಲೆಯ ಟುಫುಲ್ ಯಾರ್ಡ್ ನ ರೈಲ್ವೆ ಕಾಮಗಾರಿ ಸ್ಥಳದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ  ಮೃತರ ಸಂಖ್ಯೆ ಶನಿವಾರ 24ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 18 ಮಂದಿ ಯೋಧರು ಸೇರಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಟೆರಿಟೋರಿಯಲ್ ಆರ್ಮಿಯ 13 ಸಿಬ್ಬಂದಿ ಹಾಗೂ ಐವರು ನಾಗರಿಕರನ್ನು ರಕ್ಷಿಸಲಾಗಿದೆ. ಸುಮಾರು 33 ಮಂದಿ ನಾಪತ್ತೆ ಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ ಮತ್ತು ಕೇಂದ್ರ, ರಾಜ್ಯ ವಿಪತ್ತು ನಿರ್ವಹಣಾ ತಂಡ ಅವಿರತ ವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ ಎಂದು ಅಧಿಕಾರಿಗಳು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರೀ ಮಳೆ ಮತ್ತು ಇನ್ನಿತರ ಕಾರಣಗಳಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಭೂಕುಸಿತದಿಂದಾಗಿ ಅವಶೇಷ ಗಳಡಿ ಸಿಲುಕಿರುವ ದೇಹಗಳ ಪತ್ತೆಗಾಗಿ ವಾಲ್ ರೇಡಾರ್ ಅನ್ನು ಬಳಸಲಾಗುತ್ತಿದೆ. ಏಪ್ರಿಲ್’ನಿಂದ ಈವರೆಗೆ ಪ್ರವಾಹಕ್ಕೆ ಬಲಿಯಾ ದವರ ಸಂಖ್ಯೆ 159ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.