ಆಮ್ ಆದ್ಮಿ ಪಕ್ಷಕ್ಕೆ ಆರ್‌ಪಿ ರಟೂರಿ, ಕಮಲೇಶ್ ರಾಮನ್: ಕೈಗೆ ಮುಖಭಂಗ
ನವದೆಹಲಿ:ಉತ್ತರಾಖಂಡದಲ್ಲೂ ಕಾಂಗ್ರೆಸ್‌ಗೆ ಇಂದು ಭಾರಿ ಹಿನ್ನಡೆಯಾಗಿದೆ.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಕಚ್ಚಾಟದಿಂದಾಗಿ ಇಬ್ಬರು ನಾಯಕರು ಪಕ್ಷ ತೊರೆಯುವುದಾಗಿ ಘೋಷಿಸಿದ್ದಾರೆ. ಉತ್ತರಾಖಂಡ ಕಾಂಗ್ರೆಸ್ ಹಿರಿಯ ನಾಯಕರಾದ ಆರ್‌ಪಿ ರಟೂರಿ ಮತ್ತು ಕಮಲೇಶ್ ರಾಮನ್ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಡಾ.ಆರ್.ಪಿ.ರಾತುರಿ ಕಳೆದ ನಾಲ್ಕು ದಶಕಗಳಿಂದ ಡೆಹ್ರಾಡೂನ್‌ನಲ್ಲಿ ಕಾಂಗ್ರೆಸ್‌ಗಾಗಿ ಕೆಲಸ ಮಾಡಿದ್ದಾರೆ. ಕಮಲೇಶ್ ಅವರು ಮಹಾನಗರ ಪಾಲಿಕೆ ಅಧ್ಯಕ್ಷರಿಂದ ರಾಜ್ಯ ಉಪಾಧ್ಯಕ್ಷರ ವರೆಗೆ ಕಾಂಗ್ರೆಸ್‌ ಪಕ್ಷದ ಮಹಿಳಾ ವಿಭಾಗದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಇಬ್ಬರೂ ನಾಯಕರ ನಿರ್ಗಮನ ಉತ್ತರಾಖಂಡ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಿದೆ.