   : ನನಗೆ ಕೈಯಿಂದ ಬೆಲ್ಲ ತಿನ್ನಿಸುತ್ತಿದ್ದರು; 74ನೇ ಹುಟ್ಟುಹಬ್ಬದಂದು ತಾಯಿಯ ನೆನೆದು ಭಾವುಕರಾದ ಮೋದಿ
ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ 74ನೇ ಹುಟ್ಟುಹಬ್ಬದಂದು (  ) ತಮ್ಮ ತಾಯಿಯನ್ನು ನೆನಪಿಸಿಕೊಂಡು ಭಾವುಕರಾದರು. ನನ್ನ ತಾಯಿ ಜೀವಂತವಾಗಿದ್ದಾಗ ಜನ್ಮದಿನದಂದು  ಅವರ ಆಶೀರ್ವಾದ ಪಡೆಯಲು ಭೇಟಿ ಮಾಡುತ್ತಿದ್ದೆ. ಈ ವೇಳೆ ಅವರು ಬೆಲ್ಲತಿನ್ನಿಸುತ್ತಿದ್ದರು ಹಾಗೂ ‘ಖೀರ್’ ತಿನ್ನಿಸುತ್ತಿದ್ದರು ಎಂದು ಅವರು ಹೇಳಿಕೊಂಡರು.
ଭୁବନେଶ୍ୱରରେ ନାୟକ ପରିବାରଙ୍କ ଘରକୁ ଏକ ସ୍ୱତନ୍ତ୍ର ଗସ୍ତ।../ioJ0139HG7
ಒಡಿಶಾದಲ್ಲಿ ಮಾತನಾಡಿ ಪ್ರಧಾನಿ ಮೋದಿ ಜನುಮ ದಿನದ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿರುವ ತಾಯಿಯನ್ನು ನೆನಪಿಸಿಕೊಂಡರು. ಕಾರ್ಯಕ್ರಮಕ್ಕೆ ಬರುವ ಮೊದಲು, ನಾನು ಆದಿವಾಸಿ ಕುಟುಂಬದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದೆ. ಆ ಕುಟುಂಬದ ಸಹೋದರಿಯೊಬ್ಬರು ನನಗೆ ತಿನ್ನಲು ಖೀರ್ ನೀಡಿದರು.  ಆ ಖೀರ್ ತಿನ್ನುತ್ತಿದ್ದಾಗ  ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಎಂಬುದು ನೆನಪಾಯಿತು. . ನನ್ನ ತಾಯಿ ಜೀವಂತವಾಗಿದ್ದಾಗ,  ಜನ್ಮದಿನದಂದು ಅವಳ ಆಶೀರ್ವಾದ ಪಡೆಯಲು  ಭೇಟಿ ಮಾಡುತ್ತಿದ್ದೆ. ನನ್ನ ತಾಯಿ ನನಗೆ ಕೈಯಿಂದ  ಬೆಲ್ಲ ತಿನ್ನಿಸುತ್ತಿದ್ದರು. ಅವರು ಈಗ ಇಲ್ಲ ಆದರೆ ನನ್ನ ಆದಿವಾಸಿ ತಾಯಿ ನನಗೆ ಖೀರ್ ತಿನ್ನಿಸಿದರು ಮತ್ತು ಜನ್ಮದಿನದ ಆಶೀರ್ವಾದ ನೀಡಿದರು ” ಎಂದು ಪ್ರಧಾನಿ ಮೋದಿ ಒಡಿಶಾದ ಜನರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ತಮ್ಮ 74 ನೇ ಹುಟ್ಟುಹಬ್ಬದಂದು ಪಿಎಂ ಮೋದಿ ಒಡಿಶಾದಲ್ಲಿ ‘ಪಿಎಂ ಆವಾಸ್ ಯೋಜನೆ’ ಮಹಿಳಾ ಫಲಾನುಭವಿಗಳೊಂದಿಗೆ ಸಂವಹನ ನಡೆಸಿದರು. ಒಡಿಶಾದ ಭುವನೇಶ್ವರ ಜಿಲ್ಲೆಯಲ್ಲಿ 3800 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಕೇಂದ್ರ ಸಚಿವರಾದ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಇದನ್ನೂ ಓದಿ:  : ಪ್ರಧಾನಿ ಮೋದಿಗೆ ಪ್ರಿಯವಾದ ಖಾದ್ಯಗಳು ಯಾವುವು ಗೊತ್ತೆ?
ಎಕ್ಸ್ ಕುರಿತ ಪೋಸ್ಟ್‌ನಲ್ಲಿ, ಅಮಿತ್ ಶಾ ಅವರು ಪ್ರಧಾನಿ ಮೋದಿಯವರ “ನವ ಭಾರತದ” ದೃಷ್ಟಿಕೋನವನ್ನು ಶ್ಲಾಘಿಸಿದರು ಮತ್ತು ಪ್ರಧಾನಿ ತಮ್ಮ ಬಲವಾದ ಇಚ್ಛಾಶಕ್ತಿ ಮತ್ತು ದೃಢನಿಶ್ಚಯದಿಂದ ಅಸಾಧ್ಯವಾದ ಕಾರ್ಯಗಳನ್ನು ಸಾಧ್ಯವಾಗಿಸಿದ್ದಾರೆ ಎಂದು ಹೇಳಿದರು.
