13 ಜನರ ಕೊಂದಿದ್ದ ನರ ಭಕ್ಷಕ ಹುಲಿ ಸೆರೆ
ವಿದರ್ಭ:ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ಮೂಲಗಳ ಪ್ರಕಾರ, ಹುಲಿ ದಾಳಿಯಲ್ಲಿ ಇದುವರೆಗೆ 13 ಜನರು ಮೃತಪಟ್ಟಿ ದ್ದಾರೆ. ಗುರುವಾರ, ಅರಣ್ಯ ಅಧಿಕಾರಿಗಳು ಚುಚ್ಚು ಮದ್ದನ್ನು ಎಸೆಯುವ ಮೂಲಕ ಹುಲಿಯನ್ನು ಪಂಜರದಲ್ಲಿ ಸಿಲುಕಿಸಿದರು. ನಂತರ ರೆಕ್ಯೂ ಸೆಂಟರ್ ಗೆ ಸ್ಥಳಾಂತರಿಸಲಾಗು ವುದು ಎಂದು ತಿಳಿದು ಬಂದಿದೆ.
ಹುಲಿಯು ಚಂದ್ರಾಪುರ ಜಿಲ್ಲೆಯ ವಾಡ್ಸಾದಲ್ಲಿ ಆರು ಜನರನ್ನು, ಬಂಡಾರಾ ದಲ್ಲಿ ನಾಲ್ವರನ್ನಿ ಹಾಗೂ ಬ್ರಹ್ಮಪುರಿ ಅರಣ್ಯ ವ್ಯಾಪ್ತಿಯಲ್ಲಿ ಮೂವರನ್ನು ಕೊಂದಿತ್ತು.
ಅಕ್ಟೋಬರ್ 4 ರಂದು ಸಭೆ ನಡೆಸಿದ್ದಅಧಿಕಾರಿಗಳು ಹುಲಿ ಹಿಡಿಯುವುದಕ್ಕೆ ಕಾರ್ಯಾ ಚರಣೆ ನಡೆಸಿದ್ದರು.