   : ತಿರುಪತಿ ದೇವಸ್ಥಾನಕ್ಕೆ ರೇಷ್ಮೆ ಬಟ್ಟೆ ಅರ್ಪಿಸಿದ ಚಂದ್ರಬಾಬು ನಾಯ್ಡು
ಬೆಂಗಳೂರು :ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಶುಕ್ರವಾರ ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.  ತಿರುಪತಿಯ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಇತ್ತು ಎಂದು ಸಿಎಂ ಆರೋಪಿಸಿದ (  ) ಬಳಿಕ ಉಂಟಾದ ವಿವಾದದ ಇನ್ನೂ ತಣ್ಣಗಾಗಿಲ್ಲ. ಈ ನಡುವೆಯೇ ಸಿಎಂ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ನಾಯ್ಡು ಅವರು ತಮ್ಮ ಪತ್ನಿಯೊಂದಿಗೆ ರಾಜ್ಯ ಸರ್ಕಾರದ ಪರವಾಗಿ ದೇವರಿಗೆ “ಪಟ್ಟು ವಸ್ತ್ರ” (ರೇಷ್ಮೆ ಬಟ್ಟೆ) ಅರ್ಪಿಸಿದರು. ದಂಪತಿ  ರೇಷ್ಮೆ ಬಟ್ಟೆಗಳನ್ನು ಚಿನ್ನದ ತಟ್ಟೆಯಲ್ಲಿಟ್ಟು ತಲೆಯ ಮೇಲೆ ಹೊತ್ತುಕೊಂಡು ಮುಖ್ಯ ದ್ವಾರದ ಮೂಲಕ ದೇವಾಲಯವನ್ನು ಪ್ರವೇಶಿಸಿದರು.
ಅರ್ಪಣೆಯ ನಂತರ, ದೇವಾಲಯದ ಮುಖ್ಯ ಅರ್ಚಕರು ನಾಯ್ಡು ಅವರಿಗೆ ಪರಿವಟ್ಟಂ (ಪವಿತ್ರ ದಾರ) ಕಟ್ಟಿದರು, ಮುಖ್ಯಮಂತ್ರಿ ಹಣೆಗೆ ಸಾಂಪ್ರದಾಯಿಕ ತಿರುನಾಮಂ ಧರಿಸಿದ್ದರು. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಮತ್ತು ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಅವರು ನಾಯ್ಡು ಅವರಿಗೆ ಶ್ರೀ ವಾರಿಯ ಶೇಷ ವಸ್ತ್ರ (ಪವಿತ್ರ ಬಟ್ಟೆ) ನೀಡಿ ಗೌರವಿಸಿದರು.
ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಸಲು ಹಿಂದಿನ ಆಂಧ್ರಪ್ರದೇಶ ಸರ್ಕಾರವು ಪ್ರಾಣಿಗಳ ಕೊಬ್ಬನ್ನು ಹೊಂದಿರುವ ಕಳಪೆ ಗುಣಮಟ್ಟದ ತುಪ್ಪವನ್ನು ಬಳಸಿದೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ರಚಿಸಿದೆ.
ಇದನ್ನೂ ಓದಿ:  :  ರಾಮ, ಹಿಂದೂಗಳಿಗೆ ಅಪಮಾನ : ಬಿಲಾಲ್ ಸಲ್ಲಿಸಿದ್ದ ಎಫ್‌ಐಆರ್‌ ರದ್ದುಅರ್ಜಿ ತಿರಸ್ಕರಿಸಿದ ಹೈಕೋರ್ಟ್‌
ಸಿಬಿಐ ಮೇಲ್ವಿಚಾರಣೆಯಲ್ಲಿ ರಾಜ್ಯ ಪೊಲೀಸ್ ಅಧಿಕಾರಿಗಳು ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಸದಸ್ಯರನ್ನು ಒಳಗೊಂಡ ಎಸ್ಐಟಿ ಈ ಆರೋಪಗಳ ಬಗ್ಗೆ ತನಿಖೆ ನಡೆಸಲಿದೆ. ಈ ಆರೋಪಗಳು ವಿಶ್ವಾದ್ಯಂತ ಜನರ ಭಾವನೆಗಳನ್ನು ನೋಯಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಎಸ್ಐಟಿ ತನಿಖೆಯನ್ನು ಸಿಬಿಐ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಹೇಳಿದೆ