ಕುಲಪತಿ ನೇಮಕ ರದ್ದು: ಕೇರಳ ಸರ್ಕಾರಕ್ಕೆ ಮುಖಭಂಗ
ತಿರುವನಂತಪುರಂ:ಸರ್ಕಾರ ನೇಮಿಸಿರುವ ಕುಲಪತಿಗಳನ್ನು ಪದಚ್ಯುತಗೊಳಿಸಿದ ರಾಜ್ಯಪಾಲರ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲಾಗಿತ್ತು. ಇದೀಗ ಹೈಕೋರ್ಟ್‌ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಯೊಂದರ ಕುಲಪತಿ ನೇಮಕ ವನ್ನು ರದ್ದುಗೊಳಿಸಿ ಆದೇಶ ನೀಡಿದೆ.
ಈ ಮೂಲಕಕೇರಳದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿಗಳ ನೇಮಕಕ್ಕೆ ಸಂಬಂಧಿಸಿ ರಾಜ್ಯಪಾಲರಾದ ಆರೀಫ್‌ ಮೊಹಮದ್‌ ಖಾನ್‌ ಹಾಗೂ ಸಿಎಂ ಪಿಣರಾಯಿ ವಿಜಯನ್‌ ನಡುವೆ ನಡೆಯುತ್ತಿರುವ ತಿಕ್ಕಾಟಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
ಕೇರಳ ಹೈಕೋರ್ಟ್ ಸೋಮವಾರ ಕೇರಳದ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಡಾ ಕೆ ರಿಜಿ ಜಾನ್ ಅವರ ನೇಮಕವನ್ನು ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯಪಾಲರು ಪದಚ್ಯುತಿಗೆ ಸೂಚಿಸಿದ 10 ವಿಸಿಗಳಲ್ಲಿ ಡಾ ಜಾನ್ ಕೂಡಾ ಒಬ್ಬರು.
ಆ ಮೂಲಕ ಕೇರಳ ಸರ್ಕಾರಕ್ಕೆ ಮುಖಭಂಗವುಂಟಾಗಿದೆ.