ಜ್ಞಾನವಾಪಿ ಮಸೀದಿ ಪ್ರಕರಣ: ಮಸೀದಿ ಅರ್ಜಿ ವಜಾ
ವಾರಣಾಸಿ:ಜ್ಞಾನವಾಪಿ ಮಸೀದಿ ಆವರಣವನ್ನು ಭಗವಾನ್ ವಿಶ್ವೇಶ್ವರ ವಿರಾಜಮಾನ ನಿಗೆ ಹಸ್ತಾಂತರಿಸುವಂತೆ ಪ್ರಾರ್ಥಿಸುವ ಶೀರ್ಷಿಕೆ ದಾವೆಯ ನಿರ್ವಹಣೆ ಪ್ರಶ್ನಿಸಿ ಸಲ್ಲಿಸಲಾದ ಅಂಜುಮನ್ ಮಸೀದಿ ಸಮಿತಿಯ ಅರ್ಜಿಯನ್ನು ವಾರಣಾಸಿ ನ್ಯಾಯಾಲಯವು ವಜಾ ಗೊಳಿಸಿದೆ.
ಫಾಸ್ಟ್ ಟ್ರ್ಯಾಕ್ ಕೋರ್ಟ್ ಆಫ್ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ಮಹೇಂದ್ರ ಕುಮಾರ್ ಪಾಂಡೆ ಅವರು ಪ್ರಕರಣವನ್ನು ಡಿಸೆಂಬರ್ 2, 2022 ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿದರು.
ಸಂಪೂರ್ಣ ಜ್ಞಾನವಾಪಿ ಸಂಕೀರ್ಣದ ಸ್ವಾಧೀನವನ್ನು ಹಿಂದೂಗಳಿಗೆ ಹಸ್ತಾಂತರಿಸ ಬೇಕೆಂದು ಮತ್ತು ಫಿರ್ಯಾದುದಾರರು ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರ ನಿಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಪೂಜಿಸಲು ಅವಕಾಶ ಮಾಡಿಕೊಡ ಬೇಕೆಂದು ವಿಶ್ವ ವೈದಿಕ ಸನಾತನ ಸಂಘ (ವಿವಿಎಸ್‌ಎಸ್) ಮೊಕದ್ದಮೆ ಹೂಡಿದೆ ಎಂಬುದನ್ನು ಗಮನಿಸಬಹುದು.
ಮೇ 16 ರಂದು ಮಸೀದಿ ಆವರಣದಲ್ಲಿ ‘ಶಿವಲಿಂಗ’ ಪತ್ತೆಯಾಗಿದೆ ಎಂದು ವರದಿಯಾಗಿದೆ.