ಪೊಲೀಸ್ ಜೀಪಿಗೆ ಬೆಂಗಾವಲು ವಾಹನ ಡಿಕ್ಕಿ: ಉಪಮುಖ್ಯಮಂತ್ರಿ ಚೌತಾಲಾ ಪಾರು
ಹರಿಯಾಣ:ಹಿಸಾರ್‌ ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಅಗ್ರೋಹಾ ಬಳಿ ಉಪಮುಖ್ಯ ಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನ ಮಂಗಳವಾರ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದು ಉಪಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನವು ಹಿಸಾರ್‌ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಮಂಜಿ ನಿಂದಾಗಿ ಧಂಧೂರ್ ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ. ಬೆಂಗಾವಲು ಪಡೆಯಲ್ಲಿದ್ದ ಕಮಾಂಡೋಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಪರಿಣಾಮ ವಾಹನವನ್ನು ಬದಲಾಯಿಸಲಾಗಿದೆ.
ದಟ್ಟವಾದ ಮಂಜಿನ ಪರಿಣಾಮವಾಗಿ ಕಡಿಮೆ ಗೋಚರತೆಯಿಂದಾಗಿ ರಾಜ್ಯ ಪೊಲೀಸರ ಬೊಲೆರೊ ಕಾರು ಹಠಾತ್ ಬ್ರೇಕ್ ಹಾಕಿದಾಗ ದುಷ್ಯಂತ್ ಚೌಟಾಲಾ ಅವರ ಬೆಂಗಾವಲು ಪಡೆಗೆ ಡಿಕ್ಕಿ ಹೊಡೆದಿದೆ. ಉಪ ಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತ್ತೊಂದು ಘಟನೆಯಲ್ಲಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ತಮ್ಮ ಅಧಿಕೃತ ಕಾರಿನಲ್ಲಿ ಅಂಬಾಲಾ ಕ್ಯಾಂಟ್‌ ನಿಂದ ಗುರುಗ್ರಾಮ್‌ಗೆ ಪ್ರಯಾಣಿಸುತ್ತಿದ್ದಾಗ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.