 : ಬುದ್ಧನ ಪ್ರತಿಮೆ ಮನೆಯಲ್ಲಿ ಇಡುವುದರಿಂದ ಏನೆಲ್ಲ ಪ್ರಯೋಜನ?
ಕೆಲವು ಮನೆಗಳಲ್ಲಿ ಬುದ್ಧನ ಪ್ರತಿಮೆಯನ್ನು ( )  ನಾವು ಕಾಣಬಹುದು. ಅದು ಕೇವಲ ಅಲಂಕಾರಿಕ ವಸ್ತುವಲ್ಲ. ಶಾಂತಿ, ಪ್ರಶಾಂತತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತವಾಗಿದೆ. ವಾಸ್ತು ಶಾಸ್ತ್ರದಲ್ಲೂ ( ) ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಮನೆಯಲ್ಲಿ ಸಾಮರಸ್ಯ, ಧನಾತ್ಮಕ ಶಕ್ತಿ ವೃದ್ಧಿಸುವುದು, ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸುವುದರಿಂದ ಹಲವು ಪ್ರಯೋಜನಗಳಿವೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು. ಇದರ ಕುರಿತು ಇಲ್ಲಿದೆ ಮಾಹಿತಿ.
ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಇರಿಸುವುದು ಧನಾತ್ಮಕ ಶಕ್ತಿ ಮತ್ತು ಸಮೃದ್ಧಿಯನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುದ್ಧನು ಗುರು ಗ್ರಹವನ್ನು ಪ್ರತಿನಿಧಿಸುತ್ತಾನೆ. ಇದು ಬುದ್ಧಿವಂತಿಕೆ, ಬೆಳವಣಿಗೆ ಮತ್ತು ಆಧ್ಯಾತ್ಮಿಕತೆಯನ್ನು ಸಂಕೇತಿಸುತ್ತದೆ. ಬುದ್ಧನ ಪ್ರತಿಮೆಯನ್ನು ಮನೆಯಲ್ಲಿ ಇರಿಸುವ ಮೂಲಕ ಮನಶಾಂತಿ, ಬುದ್ಧಿವಂತಿಕೆಯನ್ನು ಉತ್ತೇಜಿಸಲು ಸಾಧ್ಯ. ಇದಕ್ಕಾಗಿ ಬುದ್ಧನ ಪ್ರತಿಮೆಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು.
ಬುದ್ಧನು ಸಮೃದ್ಧಿಯನ್ನು ಸಂಕೇತಿಸುತ್ತಾನೆ. ಅದೃಷ್ಟದ ಗ್ರಹವಾದ ಗುರುವು ಬುದ್ಧನ ಸಹಾನುಭೂತಿ ಮತ್ತು ಜ್ಞಾನೋದಯದ ಬೋಧನೆಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಮನೆಯಲ್ಲಿ ಬುದ್ಧನ ಪ್ರತಿಮೆಯನ್ನು ಹೊಂದಿದ್ದರೆ ಗುರುಗ್ರಹದ ಶಕ್ತಿ ಮನೆಗೆ ಬರುವುದು. ಇದರಿಂದ ಸಂಪತ್ತನ್ನು ಹೆಚ್ಚಿಸಬಹುದು ಮತ್ತು ಆರ್ಥಿಕ ಸ್ಥಿರತೆಯನ್ನು ತರಬಹುದು. ಸಮೃದ್ಧಿಯನ್ನು ಆಕರ್ಷಿಸಲು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮನೆಯ ಕೋಣೆ ಅಥವಾ ಪ್ರವೇಶ ದ್ವಾರದಲ್ಲಿ ಇರಿಸಿ.
ಪಂಚತತ್ತ್ವಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶದ ಎಲ್ಲಾ ಅಂಶಗಳನ್ನು ಬುದ್ಧನ ಪ್ರತಿಮೆಯು ಒಳಗೊಂಡಿರುತ್ತದೆ. ಇದು ಪ್ರಕೃತಿ ಮತ್ತು ಬ್ರಹ್ಮಾಂಡದ ನಡುವಿನ ಸಾಮರಸ್ಯವನ್ನು ಸಂಕೇತಿಸುತ್ತದೆ. ಮನೆಯಲ್ಲಿ ಆಯಕಟ್ಟಿನ ಬುದ್ಧನ ಪ್ರತಿಮೆಯನ್ನು ಇರಿಸುವುದರಿಂದ ಈ ಶಕ್ತಿಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಇದು ನಕಾರಾತ್ಮಕ ಶಕ್ತಿಗಳನ್ನು ತಟಸ್ಥಗೊಳಿಸುತ್ತದೆ ಮತ್ತು ಧನಾತ್ಮಕ ಕಂಪನಗಳು ಮುಕ್ತವಾಗಿ ಹರಿಯುವಂತೆ ಮಾಡುತ್ತದೆ. ಇದಕ್ಕಾಗಿ ಕಲ್ಲು, ಮರ ಅಥವಾ ಲೋಹದಂತಹ ನೈಸರ್ಗಿಕ ವಸ್ತುಗಳಿಂದ ಮಾಡಿದ ಬುದ್ಧನ ಪ್ರತಿಮೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಸ್ಯಗಳು ಅಥವಾ ನೀರಿನ ಬಳಿ ಇದನ್ನು ಇರಿಸುವುದರಿಂದ ಸಾಮರಸ್ಯದ ಶಕ್ತಿ ವೃದ್ಧಿಯಾಗುವುದು.
ಬುದ್ಧ ಮನಸ್ಸು ಮತ್ತು ಭಾವನೆಗಳನ್ನು ನಿಯಂತ್ರಿಸುತ್ತವೆ. ಮನೆಯಲ್ಲಿ ಧ್ಯಾನ ಮಾಡುವ ಬುದ್ಧನ ಪ್ರತಿಮೆಯನ್ನಿರಿಸುವುದು ಮಾನಸಿಕ ಶಾಂತಿ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಅಧ್ಯಯನ ಕೊಠಡಿ ಅಥವಾ ಮಲಗುವ ಕೋಣೆಯಲ್ಲಿ ಧ್ಯಾನ ಮಾಡುವ ಬುದ್ಧನ ಪ್ರತಿಮೆಯನ್ನು ಇರಿಸಿ.
ಬುದ್ಧನ ಪ್ರತಿಮೆಯು ಉನ್ನತ ಕಲಿಕೆ, ಆಧ್ಯಾತ್ಮಿಕ ಬೆಳವಣಿಗೆ ಮತ್ತು ಬುದ್ಧಿವಂತಿಕೆಯನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ. ಉನ್ನತ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ. ಆಧ್ಯಾತ್ಮಿಕ ಅಭ್ಯಾಸಗಳನ್ನು ಹೆಚ್ಚಿಸಲು ಬುದ್ಧನ ಪ್ರತಿಮೆಯನ್ನು ಧ್ಯಾನ ಪ್ರದೇಶ ಅಥವಾ ದೇವರ ಕೋಣೆಯಲ್ಲಿ ಇರಿಸಿ.
ಬುದ್ಧನ ಪ್ರತಿಮೆಯ ಶಕ್ತಿಯು ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಿಸಲು ಮತ್ತು ಸಾಮರಸ್ಯವನ್ನು ಉಂಟು ಮಾಡಲು ಸೃಷ್ಟಿಸಲು ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ, ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂತೋಷ, ಏಕತೆ ಮತ್ತು ಸಕಾರಾತ್ಮಕ ಸಂವಹನವನ್ನು ಮನೆಯಲ್ಲಿ ಉತ್ತೇಜಿಸಲು ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಲಿವಿಂಗ್ ರೂಮಿನಲ್ಲಿ ಇರಿಸಿ.
 : ಪೊರಕೆಯನ್ನು ಎಲ್ಲೆಂದರಲ್ಲಿ ಇಟ್ಟರೆ ಕಾಡಲಿದೆ ದಾರಿದ್ರ್ಯ!
ಬುದ್ಧನ ಪ್ರತಿಮೆಯು ಪ್ರತಿಕೂಲ ಪರಿಸ್ಥಿತಿಯಲ್ಲಿ ಶಾಂತತೆ ಮತ್ತು ತಾಳ್ಮೆಯನ್ನು ಉತ್ತೇಜಿಸುವ ಮೂಲಕ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ಮನೆಯ ಪ್ರವೇಶದ್ವಾರದ ಬಳಿ ಬುದ್ಧನ ಪ್ರತಿಮೆಯನ್ನು ಇರಿಸಿ.