ಹಿಮಕುಸಿತ: ಮುಂದುವರಿದ ರಕ್ಷಣಾ ಕಾರ್ಯ
ಗ್ಯಾಂಗ್‌ಟಾಕ್‌:ಸಿಕ್ಕಿಂನ ಜವಾಹರ್ ಲಾಲ್ ನೆಹರು ಮಾರ್ಗದ 15 ನೇ ಮೈಲ್ ಬಳಿ ಬುಧವಾರವೂ ಭಾರತೀಯ ಸೇನೆ, ಬಾರ್ಡರ್ ರೋಡ್ ಆರ್ಗನೈಸೇಷನ್ ಮತ್ತು ಪೊಲೀಸರು ರಕ್ಷಣಾ ಮತ್ತು ಶೋಧ ಕಾರ್ಯಾಚರಣೆ ನಡೆಸು ತ್ತಿದ್ದಾರೆ.
ಏಳು ಮಂದಿಯನ್ನು ಬಲಿತೆಗೆದುಕೊಂಡ ಭಾರೀ ಹಿಮಪಾತದಲ್ಲಿ ಹೆಚ್ಚಿನ ಪ್ರವಾಸಿಗರು ಸಿಕ್ಕಿಬಿದ್ದಿದ್ದಾರೆ ಎಂದು ಜನರು ಮತ್ತು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ಬೆಳಗ್ಗೆ ಪೂರ್ವ ಸಿಕ್ಕಿಂನ ನಾಥು ಲಾ ಪ್ರದೇಶದಲ್ಲಿ ಭಾರೀ ಹಿಮಕುಸಿತ ಸಂಭವಿಸಿದ್ದು, ಅವರ ವಾಹನಗಳು ಹಿಮದಡಿಯಲ್ಲಿ ಹೂತುಹೋಗಿದ್ದರಿಂದ ಏಳು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ.
ಗ್ಯಾಂಗ್‌ಟಾಕ್‌ನಿಂದ ನಾಥು ಲಾಗೆ ಸಂಪರ್ಕ ಕಲ್ಪಿಸುವ ಜವಾಹರಲಾಲ್ ನೆಹರು ಮಾರ್ಗದಲ್ಲಿ ಸಂಭವಿಸಿದ ಹಿಮಪಾತವಾಗಿ ಹಿಮದಡಿಯಲ್ಲಿ ಸುಮಾರು 30 ಜನರೊಂದಿಗೆ ಐದರಿಂದ ಆರು ವಾಹನಗಳು ಸಿಕ್ಕಿಹಾಕಿ ಕೊಂಡಿದ್ದವು.
