ಗೋದ್ರಾ ಹತ್ಯಾಕಾಂಡ ಪ್ರಕರಣ: ಎಂಟು ಆರೋಪಿಗಳಿಗೆ ಜಾಮೀನು ಮಂಜೂರು
ನವದೆಹಲಿ :ಗೋದ್ರಾ ಹತ್ಯಾಕಾಂಡ ಪ್ರಕರಣ(2002) ಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಅಪರಾಧಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯವು ಸೋಮವಾರ ವಜಾಗೊಳಿಸಿತ್ತು. ವಿಚಾ ರಣಾ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು. ಆದರೆ ಗುಜರಾತ್ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತ್ತು.
ಫೆಬ್ರವರಿ 27, 2002 ರಂದು, ಗುಜರಾತ್‌ನ ಗೋದ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ಎಸ್ -6 ಕೋಚ್ ಅನ್ನು ಸುಟ್ಟುಹಾಕಲಾಗಿತ್ತು. ಘಟನೆಯಲ್ಲಿ 59 ಜನರು ಸಾವನ್ನಪ್ಪಿದ್ದರು. ಇದು ರಾಜ್ಯದಲ್ಲಿ ಗಲಭೆಗೆ ಕಾರಣವಾಗಿತ್ತು.
ಪ್ರಸ್ತುತ, ಮರಣದಂಡನೆ ಶಿಕ್ಷೆಗೆ ಒಳಗಾದವರ ಜಾಮೀನು ಅರ್ಜಿಗಳನ್ನು ಶಿಕ್ಷೆಯ ಮಾಪನದ ಮೊದಲು ವಜಾಗೊಳಿಸುತ್ತಿದೆ ಎಂದು ಪೀಠ ಹೇಳಿದೆ.
ಪೀಠವು ಅಪರಾಧಿಗಳ ಉಳಿದ ಜಾಮೀನು ಅರ್ಜಿಗಳನ್ನು ಏಪ್ರಿಲ್ 21 ರಂದು ವಿಲೇವಾರಿಗಾಗಿ ಇರಿಸಿತ್ತು.