ನಾಳೆ ರಾಷ್ಟ್ರೀಯ ರಜಾದಿನ: ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್
ಅಯೋಧ್ಯೆ :ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರತಿಯೊಬ್ಬ ದೇಶವಾಸಿಯೂ ಈ ಭಾವನಾತ್ಮಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ.
ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಸೋಮವಾರವನ್ನ ರಾಷ್ಟ್ರೀಯ ರಜಾದಿನವೆಂದು ಘೋಷಿಸಿದೆ. ಬಾಲಿವುಡ್ ಜನವರಿ 22, 2024 ರಂದು ಮುಚ್ಚಲ್ಪಡುತ್ತದೆ.  ಅಧ್ಯಕ್ಷ ಬಿಎನ್ ತಿವಾರಿ ತಮ್ಮ ಹೇಳಿಕೆಯಲ್ಲಿ ಇದನ್ನು ಘೋಷಿಸಿದ್ದಾರೆ.
ಗಂಭೀರತೆಯನ್ನ ಪರಿಗಣಿಸಿ ಮಾತ್ರ ಚಿತ್ರೀಕರಣಕ್ಕೆ ಅನುಮತಿ ನೀಡಲಾಗುವುದು.
ಅಯೋಧ್ಯೆಯಿಂದ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರವನ್ನ 70ಕ್ಕೂ ಹೆಚ್ಚು ನಗರಗಳ 160ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೋರಿಸಲಾಗುವುದು. ಅದರ ಶುಲ್ಕವನ್ನ ಸಹ ನಿಗದಿಪಡಿಸಲಾಗಿದೆ. ನೀವು ಈ ನೇರ ಪ್ರಸಾರವನ್ನ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ 100 ರೂಪಾಯಿಗಳಿಗೆ ವೀಕ್ಷಿಸ ಬಹುದು.
ಅಮಿತಾಭ್ ಬಚ್ಚನ್, ಅನುಪಮ್ ಖೇರ್, ಅಜಯ್ ದೇವಗನ್, ಸನ್ನಿ ಡಿಯೋಲ್, ಹೇಮಾ ಮಾಲಿನಿ, ರಣಬೀರ್ ಕಪೂರ್, ಆಲಿಯಾ ಭಟ್, ಮಧುರ್ ಭಂಡಾರ್ಕರ್ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರನ್ನೂ ಆಹ್ವಾನಿಸಲಾಗಿದೆ. ಮೆಗಾಸ್ಟಾರ್ ಚಿರಂಜೀವಿ, ರಜನಿಕಾಂತ್, ರಿಷಬ್ ಶೆಟ್ಟಿ, ಯಶ್, ಪ್ರಭಾಸ್ ಮತ್ತು ಮೋಹನ್ ಲಾಲ್ ಸೇರಿದಂತೆ ಇತರ ತಾರೆಯರು ಈ ಭವ್ಯ ಕಾರ್ಯಕ್ರಮದ ಭಾಗವಾಗಲಿದ್ದಾರೆ.