ಕೆಲಸ ಕಳೆದುಕೊಳ್ಳುವ ಭಯ: ಉದ್ಯೋಗಿ ಆತ್ಮಹತ್ಯೆ
ನವದೆಹಲಿ:ಫಿನ್ಟೆಕ್ ಕಂಪನಿಯ ಉದ್ಯೋಗಿಯೊಬ್ಬರು ಕೆಲಸದಿಂದ ವಜಾಗೊಳಿಸಲ್ಪಡುವ ಭಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಗೌರವ್ ಗುಪ್ತಾ ಇಂದೋರ್ನ ಪೇಟಿಎಂನಲ್ಲಿ ಫೀಲ್ಡ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಗೌರವ್ ಮದುವೆಯಾಗಿ ಸುಮಾರು ಎಂಟು ವರ್ಷಗಳಾಗಿದ್ದು, ಪತ್ನಿ ಮೋಹಿನಿ ಮತ್ತು ಏಳು ಮತ್ತು ಒಂದೂವರೆ ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದ ಬಗ್ಗೆ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದು, ಅವರ ಸಾವಿನ ಬಗ್ಗೆ ನಿಖರ ಕಾರಣ ಏನು ಎಂಬುದನ್ನು ತನಿಖೆಯಿಂದ ಪತ್ತೆ ಹಚ್ಚೋ ಕಾರ್ಯದಲ್ಲಿ ತೊಡಗಿದ್ದಾರೆ.
ಅಧಿಕಾರಿಗಳೊಂದಿಗೆ ಮಾತನಾಡಿದ ಮೃತನ ಪತ್ನಿ, ಗೌರವ್ ಕೆಲವು ದಿನಗಳಿಂದ ಕೆಲಸದಿಂದಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದರು.
ಗೌರವ್ ತನ್ನ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದನು. ಈ ಭಯವು ಅವರನ್ನು ಇಂತಹ ಕಠಿಣ ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಏತನ್ಮಧ್ಯೆ, ಗೌರವ್ ಅವರ ಕುಟುಂಬ ಸದಸ್ಯರು ಶವದೊಂದಿಗೆ ಗ್ವಾಲಿಯರ್‌ಗೆ ತೆರಳಿದ್ದಾರೆ.