ಕಾಂಗ್ರೆಸ್​​ಗೆ ಶಾಕ್: ಸ್ಫರ್ಧೆಯಿಂದ ಹಿಂದೆ ಸರಿದ ಸುಚರಿತ ಮೊಹಾಂತಿ
ಪ್ರಚಾರಕ್ಕೆ ಧನಸಹಾಯ ನೀಡಲು ವಿಫಲವಾದ ಕಾರಣಗಳನ್ನು ನೀಡಿ ಹಾಗೂ ನಾನು ಉಳಿತಾಯ ಮಾಡಿದ ಎಲ್ಲ ಹಣವನ್ನು ಈಗಾಗಲೇ ಪ್ರಚಾರಕ್ಕೆ ಹಾಕಿದ್ದೇನೆ. ಇನ್ನು ಮುಂದಿನ ಪ್ರಚಾರಕ್ಕೆ ಹಣ ನನ್ನಲ್ಲಿ ಇಲ್ಲ” ಎಂದು ಪತ್ರ ಬರೆದಿದ್ದಾರೆ.
ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತನಾಗಿದ್ದೆ. ಆದರೆ ಈಗ ರಾಜಕೀಯ ಕ್ಷೇತ್ರಕ್ಕಾಗಿ ನನ್ನನ್ನೂ ನಾನು ತೊಡಗಿಸಿಕೊಂಡಿದ್ದೇನೆ. ನನ್ನಲ್ಲಿರುವ ಎಲ್ಲ ಹಣವನ್ನು ರಾಜಕೀಯ ಪ್ರಚಾರಕ್ಕೆ ಬಳಸಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪ್ರಗತಿಪರ ರಾಜಕೀಯಕ್ಕಾಗಿ ನಾನು ಸಾರ್ವಜನಿಕ ದೇಣಿಗೆ ಅಭಿಯಾನ ಮಾಡಿದೆ, ಆದರೆ ಅದು ವಿಫಲವಾಗಿದೆ ಎಂದರು.