 : ಗರ್ಬಾ ಪೆಂಡಾಲ್‌ ಪ್ರವೇಶಕ್ಕೆ ಗೋಮೂತ್ರ ಸೇವನೆ ಕಡ್ಡಾಯ ಎಂದಿದ್ದ ಬಿಜೆಪಿ ನಾಯಕ ಯೂಟರ್ನ್‌
ಇಂಧೋರ್‌:ಗೋಮೂತ್ರ ಸೇವಿಸಿದವರಿಗೆ( ) ಮಾತ್ರ ಗರ್ಭಾ ಪೆಂಡಾಲ್‌( ) ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕರೆ ನೀಡಿ ವಿವಾದಕ್ಕೀಡಿದಾಗಿದ್ದ ಇಂಧೋರ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ವರ್ಮಾ( ) ಇದೀಗ ಯೂಟರ್ನ್‌ ಹೊಡೆದಿದ್ದಾರೆ.  ತಮ್ಮ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತಮ್ಮ ಹೇಳಿಕೆ ಹಿಂಪಡೆದಿರುವ ಚಿಂಟು ವರ್ಮಾ, ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ತಮ್ಮ ಹೇಳಿಕೆಗೆ ಇಂಧೋರ್‌ನಲ್ಲಿ ಸ್ಪಷ್ಟನೆ ನೀಡಿದ ಚಿಂಟು ವರ್ಮಾ, ನಿನ್ನೆ ನಾನು ಅತ್ಯಂತ ಪವಿತ್ರ ಭಾವನೆಯಿಂದ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ, ಆದರೆ ಅನೇಕ ಜನರು ಮತ್ತು ಕಾಂಗ್ರೆಸ್ ಅದನ್ನು ವಿವಾದವಾಗಿ ಪರಿವರ್ತಿಸಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಧಾರ್ಮಿಕ ನಂಬಿಕೆಗಳಿವೆ ಎಂಬುದನ್ನು ನಾನು ನಂಬುತ್ತೇನೆ. ನಮ್ಮ ಭಾರತ ಭಾರತವು ಎಲ್ಲಾ ಧರ್ಮಗಳು ಇರುವ ದೇಶವಾಗಿದೆ. ನನ್ನ ಹೇಳಿಕೆ ಮತ್ತೊಬ್ಬರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಾಗಲೀ ಅಥವಾ ಧರ್ಮದ ವಿಚಾರದಲ್ಲಿ ಒತ್ತಡ ಹೇರುವುದಾಗಲಿ ಅಲ್ಲ. ಅದು ಕೇವಲ ಪವಿತ್ರ ಭಾವನೆಯಿಂದ ನೀಡಿರುವ ಹೇಳಿಕೆ ಎಂದು ತಿಳಿಸಿದ್ದಾರೆ.
ನಾವು ಸನಾತನ ಸಂಸ್ಕೃತಿಗೆ ಸೇರಿದವರು ಮತ್ತು ಸಂಪ್ರದಾಯಗಳು ಋಷಿಗಳ ಕಾಲದಿಂದಲೂ ನಡೆದುಕೊಂಡು ಬಂದಿವೆ, ಇಂದಿಗೂ ನಾವು ಆ ವಿಷಯಗಳನ್ನು ಅನುಸರಿಸುತ್ತೇವೆ. ನಾನು ನಿನ್ನೆ ಹೇಳಿದ್ದು ನನ್ನ ವೈಯಕ್ತಿಕ ಅಭಿಪ್ರಾಯ. ಇದನ್ನು ವಿವಾದಕ್ಕೀಡು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಏನಿದು ವಿವಾದ?
ನವರಾತ್ರಿ ಸಂದರ್ಭದಲ್ಲಿ ಆಯೋಜಿಸಲಾಗುವ ಗರ್ಭಾ ನೃತ್ಯ ಸಮಾರಂಭದ ಪೆಂಡಾಲ್‌ ಒಳಗೆ ಪ್ರವೇಶಿಸುವ ಮುನ್ನ ಜನರು ಗೋಮೂತ್ರ ಸೇವಿಸಬೇಕು. ಗೋಮೂತ್ರ ಸೇವಿಸಿದವರಿಗೆ ಮಾತ್ರ ಗರ್ಭಾ ಪೆಂಡಾಲ್‌ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಇಂಧೋರ್‌ನ ಬಿಜೆಪಿ ಜಿಲ್ಲಾಧ್ಯಕ್ಷ ಚಿಂಟು ವರ್ಮಾ ಕಾರ್ಯಕ್ರಮ ಆಯೋಜಕರಿಗೆ ಆದೇಶ ಹೊರಡಿಸಿದ್ದರು.
ಗರ್ಭಾ ಪೆಂಡಾಲ್‌ಗೆ ಪ್ರವೇಶಿಸುವವರು ಹಿಂದೂಗಳಾಗಿದ್ದರೆ ಅವರು ಗೋಮೂತ್ರ ಕುಡಿಯುವುದನ್ನು ವಿರೋಧಿಸುವುದಿಲ್ಲ. ಭಕ್ತರು ಗರ್ಬಾ ಪೆಂಡಾಲ್‌ಗೆ ಪ್ರವೇಶಿಸಲು ಅನುಮತಿಸುವ ಮೊದಲು ಗೋಮೂತ್ರ ಸೇವಿಸುತ್ತಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಸಂಘಟಕರನ್ನು ವಿನಂತಿಸಿದ್ದೇವೆ. ಆಧಾರ್ ಕಾರ್ಡ್ ಅನ್ನು ಎಡಿಟ್ ಮಾಡಬಹುದು, ಆದರೆ, ಒಬ್ಬ ವ್ಯಕ್ತಿಯು ಹಿಂದೂ ಆಗಿದ್ದರೆ, ಅವನು ಗೋಮೂತ್ರ ಸೇವಿಸಿದ ನಂತರವೇ ಗರ್ಭಾ ಪೆಂಡಾಲ್‌ ಪ್ರವೇಶಿಸುತ್ತಾನೆ ಮತ್ತು ಅದನ್ನು ನಿರಾಕರಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದರು.
ಕಾಂಗ್ರೆಸ್‌ ಕಿಡಿ
ಬಿಜೆಪಿಯ ಈ ಆದೇಶಕ್ಕೆ ಕಾಂಗ್ರೆಸ್‌ ಕಿಡಿಕಾರಿದ್ದು,ಇದು ಪಕ್ಷದ ಧ್ರುವೀಕರಣದ ಹೊಸ ತಂತ್ರ ಎಂದು ಬಣ್ಣಿಸಿದೆ. ಗೋಶಾಲೆಗಳ ದುಃಸ್ಥಿತಿಯ ಬಗ್ಗೆ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಗೋವಿನ ವಿಚಾರವನ್ನು ಕೇವಲ ರಾಜಕೀಯಕ್ಕೆ ಬಳಸಿಕೊ‍ಳ್ಳುವಲ್ಲಿ ಮಾತ್ರ ಆಸಕ್ತಿ ಹೊಂದಿದ್ದಾರೆ. ಗೋಮೂತ್ರದ ಬೇಡಿಕೆಯನ್ನು ಹೆಚ್ಚಿಸುವುದು ಧ್ರುವೀಕರಣದ ರಾಜಕೀಯ ಬಿಜೆಪಿಯ ಹೊಸ ತಂತ್ರವಾಗಿದೆ ಎಂದು ಸಂಸದ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಆರೋಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:  : ಜಾತಿವಾದ ಮುಂದಿಟ್ಟು ದೇಶಭಕ್ತಿ ಹತ್ತಿಕ್ಕಲು ಕಾಂಗ್ರೆಸ್‌ ಯತ್ನ; ಮೋದಿ ಆರೋಪ