ಪ್ರಜಾವಾಣಿ ಕ್ವಿಜ್‌ 1. ಈಗಿನ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಯಾರು? ಅ) ಪಿ. ವಿ. ಚಾರಿ ಆ) ಸಂಜೀವ ಕುಮಾರ್ ಇ) ಓಂಪ್ರಕಾಶ್ ರಾವತ್ ಈ) ಸುನಿಲ್ ಅರೊರಾ 2. ರಾಜೀವ್ ಗಾಂಧಿ ಹತ್ಯೆ ಕುರಿತು ವಿಚಾರಣೆ ನಡೆಸಿದ ಆಯೋಗ ಯಾವುದು? ಅ) ಸರ್ಕಾರಿಯ ಆಯೋಗ ಆ) ವರ್ಮ ಆಯೋಗ ಇ) ಕುಲದೀಪ್ ಸಿಂಗ್ ಆಯೋಗ ಈ) ಥಾಕರ್ ಆಯೋಗ 3. ಸಿ-ಡಾಕ್ ಯಾವುದಕ್ಕೆ ಸಂಬಂಧಿಸಿದೆ? ಅ) ದೂರದರ್ಶನ ಆ) ದೂರಸಂಪರ್ಕ ಇ) ದೂರದರ್ಶಕ ಈ) ಬಾಹ್ಯಾಕಾಶ 4. ’ವಿಸ್ಡಂ’ಹಲ್ಲುಗಳು ಸಾಮಾನ್ಯವಾಗಿ ಯಾವ ವಯಸ್ಸಿನಲ್ಲಿ ಬೆಳೆಯುತ್ತವೆ? ಅ) 30-40 ವರ್ಷ ಆ) 25-35 ವರ್ಷ ಇ) 17-30 ವರ್ಷ ಈ) 35-45 ವರ್ಷ 5. ನದಿಯಿಂದಾಗುವ ಮಣ್ಣಿನ ಸವೆತವು ಏನನ್ನು ಅವಲಂಬಿಸಿದೆ? ಅ) ನದಿಯ ಉದ್ದ ಆ) ನದಿಯ ಪ್ರವಾಹದ ವೇಗ ಇ) ನದಿಯ ಅಗಲ ಈ) ನದಿಯ ಆಳ 6. ಮೊದಲ ಏಷ್ಯಾಕಪ್ ಕ್ರಿಕೆಟ್ ಪಂದ್ಯದ ಪ್ರಶಸ್ತಿ ಪಡೆದ ದೇಶ ಯಾವುದು? ಅ) ಬಾಂಗ್ಲಾ ಆ) ಭಾರತ ಇ) ಶ್ರೀಲಂಕಾ ಈ) ಪಾಕಿಸ್ತಾನ 7. ಪಾಪನಾಶಂ ಶಿವನ್ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ? ಅ) ಕರ್ನಾಟಕ ಸಂಗೀತ ಆ) ಪಾಶ್ಚಾತ್ಯ ಸಂಗೀತ ಇ) ಹಿಂದೂಸ್ತಾನಿ ಸಂಗೀತ ಈ) ಜನಪದ ಸಂಗೀತ 8. ಇವರಲ್ಲಿ ಭೂದಾನ ಚಳವಳಿಯ ನೇತಾರರು ಯಾರು? ಅ) ಗಾಂಧೀಜಿ ಆ) ಕೃಪಲಾನಿ ಇ) ವಿನೊಬಾ ಭಾವೆ ಈ) ನೆಹರು 9. ತೆಲುಗು ದೇಶಂ ಪಕ್ಷದ ಸ್ಥಾಪಕರು ಯಾರು? ಅ) ಎನ್. ಟಿ. ರಾಮರಾವ್ ಆ) ಚಂದ್ರಬಾಬು ನಾಯ್ಡು ಇ) ಎಂ.ಜಿ.ಆರ್. ಈ) ನಾದೆಂಡ್ಲ ಭಾಸ್ಕರ ರಾವ್ 10. ಹಣ್ಣನ್ನು ಕೃತಕವಾಗಿ ಪಕ್ವಗೊಳಿಸಲು ಬಳಸುವ ಅನಿಲ ಯಾವುದು ? ಅ) ಅಸಿಟಲಿನ್ ಆ) ಎಥಿಲೀನ್ ಇ) ಮೀಥೇನ್ ಈ) ಕ್ಲೋರಿನ್ ಹಿಂದಿನ ಸಂಚಿಕೆಯ ಸರಿಯುತ್ತರಗಳು: 1. ಆ) ಕಿಡ್ನಿ ಸಮಸ್ಯೆ; 2. ಇ) ಕುಣಿಗಲ್; 3. ಈ) ಜನರಲ್ ಕಾರಿಯಪ್ಪ; 4. ಈ) ಹಸುರುಹೊನ್ನು; 5. ಅ) ಮಧ್ವಾಚಾರ್ಯರು; 6. ಈ) ದಕ್ಷಿಣ ಆಫ್ರಿಕಾ; 7. ಆ) ಪಾಶ್ಚಾತ್ಯ ಸಂಗೀತ; 8. ಅ) ಮಿಜೋರಾಂ; 9. ಇ) ಶರಣಾಗತಿ; 10. ಆ) ಜಮ್ಮು-ಕಾಶ್ಮೀರ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.