ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು ಭಾಗ – 5 56. ಅತೀ ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಗುಣವಿರುವ ಮಣ್ಣು ಎ) ಕೆಂಪು ಮಣ್ಣು→ಬಿ) ಕಪ್ಪು ಮಣ್ಣು ಸಿ) ಜಂಬಿಟ್ಟಿಗೆ ಮಣ್ಣು→ಡಿ) ಮೆಕ್ಕಲು ಮಣ್ಣು 57. ನವಕೋಟಿ ನಾರಾಯಣ ಎಂಬ ಬಿರುದನ್ನು ಹೊಂದಿದ್ದವರು ಯಾರು? ಎ) ಚಿಕ್ಕದೇವರಾಜ ಒಡೆಯರ್‌ ಬಿ) ಕೃಷ್ಣದೇವರಾಜ ಒಡೆಯರ್‌ ಸಿ) ರಾಜ ಒಡೆಯರ್‌ ಡಿ) ಕಂಠೀರವ ನರಸರಾಜ ಒಡೆಯರ್‌ 58. ಹೊಂದಿಸಿ ಬರೆಯಿರಿ 1) ಸುವರ್ಣ ಚತುಷ್ಕೋನ ಅ) ಕರ್ನಾಟಕದಲ್ಲಿನ →→→ ಬಂದರು 2) ವಜ್ರ ಚತುಷ್ಕೋನ ಆ) ಹಿಂದೂಸ್ತಾನ್ ಹಡಗು →→→ನಿರ್ಮಾಣ ಕಾರ್ಖಾನೆ 3) ಬೇಲಿಕೇರಿ→ಇ) ರಸ್ತೆ ಸಾರಿಗೆ 4) ವಿಶಾಖಪಟ್ಟಣ→ಈ) ರೈಲು ಮಾರ್ಗ ಎ) 1-ಈ, 2-ಇ, 3-ಅ, 4-ಆ ಬಿ) 1-ಇ, 2-ಈ, 3-ಅ, 4-ಆ ಸಿ) 1-ಅ, 2-ಆ, 3-ಇ, 4-ಈ ಡಿ) 1-ಇ, 2-ಆ, 3-ಈ, 4-ಅ 59. ಒಬ್ಬ ವ್ಯಕ್ತಿಯು ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ. ಅವನು ಗಡಿಯಾರದ ಮುಳ್ಳುಗಳು ಚಲಿಸುವ ದಿಕ್ಕಿಗೆ 90 ಡಿಗ್ರಿ ತಿರುಗುತ್ತಾನೆ, ಮತ್ತೆ ಅದೇ ರೀತಿ 90 ಡಿಗ್ರಿ ತಿರುಗುತ್ತಾನೆ. ಮತ್ತೊಮ್ಮೆ ಅದೇ ದಿಕ್ಕಿನಲ್ಲಿ 90 ಡಿಗ್ರಿ ತಿರುಗುತ್ತಾನೆ. ಹಾಗಾದರೆ ಈಗ ಆತ ಯಾವ ದಿಕ್ಕಿನತ್ತ ಮುಖ ಮಾಡಿದ್ದಾನೆ? ಎ) ಉತ್ತರ→→ಬಿ) ಪಶ್ಚಿಮ ಸಿ) ನೈರುತ್ಯ→→ಡಿ) ಪೂರ್ವ 60. ಇತ್ತೀಚೆಗೆ ಚರ್ಚೆಯಲ್ಲಿರುವ ‘ಪ್ರಯೋಗಾಲಯ ಮೂಲದ ಸಿದ್ಧಾಂತ’ ಯಾವುದಕ್ಕೆ ಸಂಬಂಧಿಸಿದೆ? ಎ) ಕೋವಿಡ್‌ ವ್ಯಾಕ್ಸಿನ್ ಸಂಶೋಧನೆ ಬಿ) ಕೋವಿಡ್‌ ಹುಟ್ಟಿನ ಮೂಲ ಸಿ) ಕೋವಿಡ್‌ ಪ್ರಸರಣದ ತೀವ್ರತೆ ಡಿ) ಕೋವಿಡ್ ವೈರಸ್ ರೂಪಾಂತರ 61. 2020ನೇ ಸಾಲಿನಲ್ಲಿ ಭಾರತ ರತ್ನ ಪಡೆದವರು ಯಾರು? ಎ) ಸಚಿನ್ತೆಂಡೂಲ್ಕರ್‌ & ಸಿ.ಎನ್.ಆರ್.ರಾವ್ ಬಿ) ಮದನ ಮೋಹನ್‌ ಮಾಳವೀಯ & ಅಟಲ್‌ ಬಿಹಾರಿ ವಾಜಪೇಯಿ ಸಿ) ಪ್ರಣಬ್ಮುಖರ್ಜಿ, ಭೂಪೇನ್ಹಜಾರಿಕಾ & ನಾನಾಜಿ ದೇಶಮುಖ್ ಡಿ) ಯಾರೂ ಅಲ್ಲ 62. ‘ಭಾರತದ ಪುನರುಜ್ಜೀವನದ ಪಿತಾಮಹ’ ಎಂದು ಹೆಸರಾದವರು ಯಾರು? ಎ) ಮಹಾತ್ಮ ಗಾಂಧೀಜಿ ಬಿ) ದಾದಾಭಾಯಿ ನವರೋಜಿ ಸಿ) ರಾಜಾ ರಾಮ್ ಮೋಹನ್ ರಾಯ್‌ ಡಿ) ಲಾಲಾ ಲಜಪತ್‌ ರಾಯ್ 63. ಸ್ವತಂತ್ರ ಭಾರತದ ಎರಡನೇ ರಾಷ್ಟ್ರಪತಿ ಆಗಿದ್ದವರು ಯಾರು? ಎ) ಡಾ.ಬಾಬು ರಾಜೇಂದ್ರ ಪ್ರಸಾದ್ ಬಿ) ಡಾ.ಎಸ್‌.ರಾಧಾಕೃಷ್ಣನ್ ಸಿ) ವಿ.ವಿ.ಗಿರಿ ಡಿ) ಝಾಕೀರ್‌ ಹುಸೇನ್‌ 64. ಹೊಂದಿಸಿ ಬರೆಯಿರಿ 1. ರ್‍ಯಾಡ್‌ ಕ್ಲಿಫ್‌ ರೇಖೆ ಅ)ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ 2. ಮ್ಯಾಕ್ ಮೋಹನ್ ರೇಖೆ ಆ)ಜರ್ಮನಿ ಮತ್ತು →→→ ಫ್ರಾನ್ಸ್ 3. ಡುರಾಂಡ್ ರೇಖೆ → ಇ) ಭಾರತ ಮತ್ತು →→→ ಪಾಕಿಸ್ತಾನ 4. ಹಿಂಡೆನ್ ಬರ್ಗ್ ರೇಖೆ → ಈ) ಭಾರತ ಮತ್ತು →→→ ಚೀನಾ ಎ) 1-ಈ, 2-ಇ, 3-ಅ, 4-ಆ ಬಿ) 1-ಇ, 2-ಅ, 3-ಈ, 4-ಆ ಸಿ) 1-ಅ, 2-ಆ, 3-ಇ, 4-ಈ ಡಿ) 1-ಇ, 2-ಈ, 3-ಅ, 4-ಆ 65. ‘ಕುರುಕ್ಷೇತ್ರ’ ಯುದ್ಧದಲ್ಲಿ ಪಾಲ್ಗೊಂಡಿದ್ದ ಕೌರವ ಮತ್ತು ಪಾಂಡವರ ಸೇನಾ ಬಲ ಅನುಕ್ರಮವಾಗಿ ಎಷ್ಟು ಅಕ್ಷೋಹಿಣಿ ಇತ್ತು? ಎ) 7–11 →→ಬಿ) 11–7 ಸಿ) 10–8 →→ಡಿ) 8–10 (ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ⇒ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.