ಅಂಧರ ಕ್ರಿಕೆಟ್‌ ಸರಣಿ ಕ್ಲೀನ್‌ ಸ್ಲೀಪ್ ಮಾಡಿದ ಭಾರತ ಬೆಂಗಳೂರು: ಮೂರನೇ ಪಂದ್ಯದಲ್ಲೂ ಅಮೋಘ ಜಯ ಸಾಧಿಸಿದ ಭಾರತ ತಂಡ ಬಾಂಗ್ಲಾದೇಶ ಎದುರಿನಅಂಧರ ಟ್ವೆಂಟಿ20 ಕ್ರಿಕೆಟ್ ಸರಣಿಯನ್ನು ಕ್ಲೀನ್‌ ಸ್ಲೀಪ್ ಮಾಡಿಕೊಂಡಿತು. ಅಂಧರ ಕ್ರಿಕೆಟ್ ಸಂಸ್ಥೆ ಮತ್ತು ಸಿಎಬಿಎಂಪಿ ಭೋಪಾಲ್‌ನಲ್ಲಿ ಆಯೋಜಿಸಿದ್ದ ಮೂರು ಪಂದ್ಯಗಳ ಸರಣಿಯ ಕೊನೆಯ ಹಣಾಹಣಿಯಲ್ಲಿ ಭಾರತ ತಂಡ ಭಾನುವಾರ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. 133 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ 15.1 ಓವರ್‌ಗಳಲ್ಲಿ ದಡ ಸೇರಿತು. ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ದೀಪಕ್ ಮಲಿಕ್‌, ನಕುಲ್‌ ಬಿ ಮತ್ತು ವೆಂಕಟೇಶ್ವರ್ ರಾವ್‌ ಅವರ ಅಮೋಘ ಆಟದ ನೆರವಿನಿಂದ ಸುಲಭವಾಗಿ ಜಯ ಗಳಿಸಿತು. ಮೊದಲ ಪಂದ್ಯದಲ್ಲಿ ಭಾರತ 124 ರನ್‌ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಜಯ ಗಳಿಸಿತ್ತು. ಸರಣಿಯ ಶ್ರೇಷ್ಠ ಆಟಗಾರರಾದ ಭಾರತದ ಕಲ್ಪೇಶ್ ನಿಂಬಾಡ್ಕರ್‌ (ಬಿ1 ವಿಭಾಗ), ವೆಂಕಟೇಶ್ವರ ರಾವ್‌ (ಬಿ2 ವಿಭಾಗ) ಮತ್ತು ಪ್ರಕಾಶ್ ಜಯರಾಮಯ್ಯ (ಬಿ3 ವಿಭಾಗ) ಅವರಿಗೆ ತಲಾ ₹ 10,000 ನೀಡಲಾಯಿತು.ಮೂರು ಏಕದಿನ ಪಂದ್ಯಗಳ ಸರಣಿ ಸೋಮವಾರ ಅರಂಭವಾಲಿದೆ. ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 132 (ಮೊಹಮ್ಮದ್ ಅಶಿಕುರ್ ರಹಿಮಾನ್ 18), ಮಹಬದುಲ್ ಹಸನ್ 3, ಮೊಹಮ್ಮದ್ ಅಸ್ಮತ್‌ ಅಲಿ 10, ಆರಿಫ್‌ ಉಲ್ಲಾ 37, ಅಬ್ದುಲ್‌ ಜೊಬಿರ್‌ 2, ಮೊಹಮ್ಮದ್ ಫೈಜಲ್ 2, ಮೊಹಮ್ಮದ್ ಸಲ್ಮಾನ್ 13, ಮೊಹಮ್ಮದ್ ರಿಜ್ವಿ ಹಸನ್ 21; ವೆಂಕಟೇಶ್ವರ್ ರಾವ್16ಕ್ಕೆ1, ನಕುಲ್ ಬಿ8ಕ್ಕೆ2, ಲಲಿತ್ ಮೀನಾ9ಕ್ಕೆ1, ಪ್ರವೀಣ್ ಕುಮಾರ್8ಕ್ಕೆ1, ವಿಜಯ ಕುಮಾರ್ 10ಕ್ಕೆ1); ಭಾರತ: 15.1 ಓವರ್‌ಗಳಲ್ಲಿ 6ಕ್ಕೆ 136 (ವಿಜಯ ಕುಮಾರ್ 12, ನಕುಲ್ ಬಿ 22, ದೀಪಕ್ ಮಲಿಕ್‌ 45, ವೆಂಕಟೇಶ್ವರ ರಾವ್ 22, ಪ್ರಕಾಶ್ ಜಯರಾಮಯ್ಯ 11; ಮೊಹಮ್ಮದ್ ಸಲ್ಮಾನ್ 33ಕ್ಕೆ2, ಮೊಹಮ್ಮದ್ ಅಸ್ಮತ್ ಅಲಿ31ಕ್ಕೆ3). ಫಲಿತಾಂಶ: ಭಾರತಕ್ಕೆ 4 ವಿಕೆಟ್‌ಗಳ ಜಯ; 3 ಪಂದ್ಯಗಳ ಸರಣಿಯಲ್ಲಿ 3–0 ಜಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.