ಚಾಲೆಂಜ್‌ ಅಂದ್ರೆ... ಪ್ರಶ್ನೆಪತ್ರಿಕೆ ಹದಿನೈದು ಹಣ್ಣುಗಳ ಹೆಸರು ಬರೆಯಿರಿ? ಸೇಬು, ಮೂಸಂಬಿ, ದಾಳಿಂಬೆ ಮತ್ತು 1 ಡಜನ್‌ ಬಾಳೆಹಣ್ಣು. ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ? ಪ್ರಪಂಚದಲ್ಲಿರೋದು ಒಂದೇ ದೇಶ ಅದು ಭಾರತ. ಉಳಿದದ್ದೆಲ್ಲ ವಿದೇಶ. 1983ರ ವಿಶ್ವಕಪ್‌ ಯಾರಿಗೆ ದೊರೆಯಿತು? ಗೆದ್ದೋರಿಗೆ. ಮಹಾತ್ಮಾ ಗಾಂಧೀಜಿ ಸಾಯದೇ ಇದ್ದಿದ್ದರೆ? ಈಗಲೂ ಬದುಕಿರುತ್ತಿದ್ದರು... ಕಾಯಿಸಿದಾಗ ಘನ ವಸ್ತುವಾಗಿ ಪರಿವರ್ತನೆ ಹೊಂದುವ ದ್ರವ ಯಾವುದು? ಇಡ್ಲಿ, ದೋಸೆ ಹಿಟ್ಟು. ಕ್ಲೋರೈಡ್‌ ಕಾಯಿಸಿದಾಗ ಏನಾಗುತ್ತದೆ? ಕಾಯುತ್ತದೆ ನೀರಿನಿಂದ ವಿದ್ಯುತ್‌ ಉತ್ಪತ್ತಿ ಮಾಡಲು ಕಾರಣ? ಸ್ನಾನ ಮಾಡುವಾಗ ಶಾಕ್‌ ಹೊಡೀಬಾರದು ಅಂತ. ಮಾತು ಬರದವರಿಗೆ ಮೂಕ ಎಂದು ಕರೆದರೆ ಕಿವುಡನಿಗೆ ಏನೆನ್ನ ಬಹುದು? ಏನಾದರೂ ಕರೀಬಹುದು. ಅವರಿಗೆ ಕಿವಿಯೇ ಕೇಳಿಸುವುದಿಲ್ಲ. ಚಾಲೆಂಜ್‌ ಅಂದ್ರೆ ಏನು? ದಮ್‌ ಇದ್ರೆ ನನ್ನ ಪಾಸು ಮಾಡು... ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.