ಫೆ.21ರಿಂದ ಬ್ಯಾಸ್ಕೆಟ್‌ಬಾಲ್‌ ಟೂರ್ನಿ ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್‌ ಸಂಸ್ಥೆ (ಕೆಎಸ್‌ಬಿಎ) ಇದೇ 21ರಿಂದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ‘ಎ’ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ ನಡೆಸಲು ನಿರ್ಧರಿಸಿದೆ. ಹಾಲಿ ಚಾಂಪಿಯನ್‌ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಮತ್ತು ರನ್ನರ್ಸ್‌ ಅಪ್‌ ಎಂಇಜಿ ತಂಡಗಳು ಭಾಗವಹಿಸಲಿವೆ. ವಿಜಯ ಬ್ಯಾಂಕ್‌, ಡಿವೈಇಎಸ್‌ ಬೆಂಗಳೂರು, ಸದರ್ನ್‌ ಬ್ಲೂಸ್‌, ಬಿಎಸ್‌ಎನ್‌ಎಲ್‌, ಯಂಗ್‌ ಓರಿಯನ್ಸ್‌, ಎನ್‌ಜಿವಿ, ಬೀಗಲ್ಸ್‌, ಜಯನಗರ ಎಸ್‌ಸಿ, ಮಂಗಳೂರು ಕ್ಲಬ್‌ ಮತ್ತು ಮೈಸೂರಿನ ರೈಸಿಂಗ್‌ ಸ್ಟಾರ್‌ ತಂಡಗಳೂ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.