ಪ್ರೊ ಲೀಗ್‌ ಪಂದ್ಯಕ್ಕೆ ಭಾರತ ತಂಡ: ಮನ್‌ಪ್ರೀತ್‌ಗೆ ಮುಂದಾಳತ್ವ ನವದೆಹಲಿ: ವಿಶ್ವದ ಅಗ್ರಮಾನ್ಯ ತಂಡ ಬೆಲ್ಜಿಯಂ ವಿರುದ್ಧ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ ಪಂದ್ಯಗಳನ್ನು ಆಡಲಿರುವ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ. 24 ಆಟಗಾರರ ತಂಡವನ್ನು ಸೋಮವಾರ ಪ್ರಕಟಿಸಲಾಯಿತು. ಹರ್ಮನ್‌ಪ್ರೀತ್‌ ಸಿಂಗ್‌ ಅವರು ಉಪನಾಯಕರಾಗಿರುವ ತಂಡದಲ್ಲಿ ರಾಜಕುಮಾರ್‌ ಪಾಲ್‌ ಹೊಸದಾಗಿ ಅವಕಾಶ ಪಡೆದಿರುವ ಏಕೈಕ ಆಟಗಾರರಾಗಿದ್ದಾರೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಇದೇ ತಿಂಗಳ 8 ಮತ್ತು 9 ರಂದು ಪಂದ್ಯಗಳು ನಡೆಯಲಿವೆ. ಭಾರತ ಜೂನಿಯರ್‌ ತಂಡದ ಪರ ರಾಜಕುಮಾರ್ ಅವರು ಸ್ಫೂರ್ತಿಯುತ ಪ್ರದರ್ಶನ ನೀಡಿದ್ದರು. ಆ ತಂಡ ಮಲೇಷ್ಯಾದಲ್ಲಿ ನಡೆದ ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಟೂರ್ನಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಒಲಿಂಪಿಕ್‌ ಆಯ್ಕೆಗಾಗಿ ಆಟಗಾರರಿಗೆ ಅವಕಾಶ ನೀಡುವ ವಿಷಯದಲ್ಲಿ ಸಮತೋಲನ ಕಾಪಾಡಿಕೊಳ್ಳುವುದೇ ಪ್ರೊ ಲೀಗ್‌ ಪಂದ್ಯಗಳ ಉದ್ದೇಶವಾಗಿದೆ. ಪ್ರಬಲ ತಂಡಕ್ಕೆ ಬೇಕಾಗಿರುವ ಸಂಯೋಜನೆ ರೂಪಿಸುವುದರ ಜೊತೆಗೆ ಬಲಿಷ್ಠ ತಂಡಗಳ ಜೊತೆಗೆ ನಾವು ಪೈಪೋಟಿ ನಡೆಸಬಹುದು ಎಂಬುದನ್ನು ತೋರಿಸುವುದೂ ಇದರ ಉದ್ದೇಶ ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ತಿಳಿಸಿದರು. ತಂಡ ಹೀಗಿದೆ: ಪಿ.ಆರ್‌.ಶ್ರೀಜೇಶ್‌, ಕೃಷನ್‌ ಬಹಾದ್ದೂರ್‌ ಪಾಠಕ್‌, ಹರ್ಮನ್‌ಪ್ರೀತ್‌ ಸಿಂಗ್‌, ಗುರಿಂದರ್‌ ಸಿಂಗ್‌, ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ಜರ್ಮನ್‌ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ), ವಿವೇಕ್‌ ಸಾಗರ್ ಪ್ರಸಾದ್‌, ಚಿಂಗ್ಲೇಸನ ಸಿಂಗ್‌, ರಾಜಕುಮೃ್‌ ಪಾಲ್‌, ದಿಲ್‌ಪ್ರೀತ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ರಮಣದೀಪ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಮನದೀಪ್‌ ಸಿಂಗ್‌, ಶಂಶೇರ್‌ ಸಿಂಗ್‌, ಗುರುಸಾಹಿಬ್‌ಜಿತ್‌ ಸಿಂಗ್‌, ಕೊತಜಿತ್‌ ಸಿಂಗ್‌, ಕದಂಗಬಾಮ್‌, ಬಿರೇಂದ್ರ ಲಾಕ್ರಾ, ನೀಲಕಂಠ ಶರ್ಮಾ, ಗುರ್ಜತ್‌ ಸಿಂಗ್‌, ಎಸ್‌.ವಿ.ಸುನೀಲ್‌. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.