30ರಿಂದ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿ ಬೆಂಗಳೂರು: ಕರ್ನಾಟಕ ಟೇಬಲ್‌ ಟೆನಿಸ್‌ ಸಂಸ್ಥೆಯು (ಕೆಟಿಟಿಎ) ಮೊದಲ ಬಾರಿ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯನ್ನು ಆಯೋಜಿಸುತ್ತಿದೆ. ಅಕ್ಟೋಬರ್‌ 30ರಿಂದ ಟೂರ್ನಿಯು ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ, ಪುರುಷ ಹಾಗೂ ಮಹಿಳೆಯರ ಜೂನಿಯರ್‌, ಯೂತ್‌ ಹಾಗೂ ಸೀನಿಯರ್ ಸಿಂಗಲ್ಸ್ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಡೆಟ್ಸ್ ಹಾಗೂ ಸಬ್‌ ಜೂನಿಯರ್‌ ವಿಭಾಗದ ಪಂದ್ಯಗಳನ್ನು ಆಯೋಜಿಸುತ್ತಿಲ್ಲ. ಟೂರ್ನಿಗೆ ಹೆಸರು ನೋಂದಾಯಿಸಲು ಇದೇ 26 ಕೊನೆಯ ದಿನ. ಮಾಹಿತಿಗಾಗಿ ಮುಖ್ಯ ರೆಫರಿ ಮನೋಹರನ್‌ (ಮೊ.ಸಂ. 9448808663) ಅವರನ್ನು ಸಂಪರ್ಕಿಸಬೇಕು ಎಂದು ಕೆಟಿಟಿಎ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.