ಮೈಸೂರು ಓಪನ್‌ ಗಾಲ್ಫ್‌: ಅರ್ಜುನ್ ಶರ್ಮಗೆ ಮುನ್ನಡೆ ಮೈಸೂರು: ಗಾಲ್ಫರ್ ಅರ್ಜುನ್‌ ಶರ್ಮ ಇಲ್ಲಿ ನಡೆಯುತ್ತಿರುವ ‘ಮೈಸೂರು ಓಪನ್‌–2024’ ಗಾಲ್ಫ್‌ ಟೂರ್ನಿಯಲ್ಲಿ ಶುಕ್ರವಾರ ಎರಡನೇ ಸುತ್ತಿನ ಅಂತ್ಯಕ್ಕೆ ಮುನ್ನಡೆ ಸಾಧಿಸಿದರು. ಪ್ರೊಫೆಷನಲ್‌ ಗಾಲ್ಫ್ ಟೂರ್ ಆಫ್‌ ಇಂಡಿಯಾ (ಪಿಜಿಟಿಐ) ಹಾಗೂ ಜಯಚಾಮರಾಜೇಂದ್ರ ಒಡೆಯರ್‌ ಗಾಲ್ಫ್‌ ಕ್ಲಬ್‌ (ಜೆಡಬ್ಲ್ಯುಜಿಸಿ) ಸಹಯೋಗದಲ್ಲಿ ನಡೆದಿರುವ ಟೂರ್ನಿಯ ಎರಡನೇ ದಿನದಂದು ನೋಯ್ಡದ ಆಟಗಾರ ಅರ್ಜುನ್‌ ಲೀಡ್ ಪಡೆದರು. ಶೌರ್ಯ ಬಿನು, ಅಕ್ಷಯ್‌ ಶರ್ಮ ಮತ್ತು ಕಾರ್ತಿಕ್ ಶರ್ಮ ಜಂಟಿ ಎರಡನೇ ಸ್ಥಾನದಲ್ಲಿ ಮುನ್ನಡೆದರು. ಗುರುವಾರ ಅಗ್ರಸ್ಥಾನದಲ್ಲಿದ್ದ ಅಮನ್‌ ಐದನೇ ಸ್ಥಾನಕ್ಕೆ ಕುಸಿದರೆ, ಮೈಸೂರಿನ ಹವ್ಯಾಸಿ ಗಾಲ್ಫರ್ ವೀರ್ ಗಣಪತಿ 12ನೇ ಸ್ಥಾನಕ್ಕೆ ಸರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.