ಮಣಿಪುರ: 34 ಯುಎನ್‌ಎಲ್‌ಎಫ್‌ ಬಂಡುಕೋರರು ಶರಣು ನವದೆಹಲಿ: ಮ್ಯಾನ್ಮಾರ್‌ ಮೂಲಕ ಮಣಿಪುರದೊಳಗೆ ನುಸುಳಲು ಯತ್ನಿಸಿದ್ದ, ಯುಎನ್‌ಎಲ್‌ಎಫ್‌(ಪಿ) ಸಂಘಟನೆಯ 34 ಸಶಸ್ತ್ರ ಬಂಡುಕೋರರು ಅಸ್ಸಾಂ ರೈಫಲ್ಟ್‌ ಮುಂದೆ ಶರಣಾಗಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಮ್ಯಾನ್ಮಾರ್‌ನಲ್ಲಿ ಅವರ ವಿರೋಧಿ ಪಡೆ ಪಿಡಿಎಫ್‌ ಸದಸ್ಯರು ತೀವ್ರ ಗುಂಡಿನ ದಾಳಿ ನಡೆಸಿದ್ದರಿಂದ ಎನ್‌ಎನ್‌ಎಲ್‌ಎಫ್(ಪಿ)ನ ಬಂಡುಕೋರರು, ಶಸ್ತ್ರಾಸ್ತ್ರಗಳ ಸಮೇತ ಶರಣಾದರು. ಎಲ್ಲರನ್ನು ಮಣಿಪುರ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.