ಬಿಜೆಪಿ ಅಭ್ಯರ್ಥಿಗಳಿಗೆ ವಿರೋಧ: ಹರಿಂದರ್‌ ಸಿಂಗ್‌ ಚಂಡೀಗಢ: ಲೋಕಸಭಾ ಚುನಾವಣೆಗೆ ಮತಯಾಚಿಸಲು ಬರುವ ಬಿಜೆಪಿ ಅಭ್ಯರ್ಥಿಗಳನ್ನು ವಿರೋಧಿಸಲು ಪಂಜಾಬ್‌ನ ಗ್ರಾಮಸ್ಥರನ್ನು ಸಜ್ಜುಗೊಳಿಸಲಾಗುವುದು ಎಂದು ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಹರಿಂದರ್‌ ಸಿಂಗ್‌ ಲಖೋವಲ್ ಮಂಗಳವಾರ ತಿಳಿಸಿದರು. ಬಿಜೆಪಿ ಮುಖಂಡರಲ್ಲಿ ಪ್ರಶ್ನೆಗಳನ್ನು ಕೇಳುವುದನ್ನು ರೈತರು ಮುಂದುವರಿಸಲಿದ್ದಾರೆ ಮತ್ತು ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು. ಫರೀದ್‌ಕೋಟ್‌ನ ಬಿಜೆಪಿ ಅಭ್ಯರ್ಥಿ ಹನ್ಸ್‌ರಾಜ್‌ ಹನ್ಸ್‌, ಅಮೃತಸರದ ಅಭ್ಯರ್ಥಿ ತರಣ್‌ಜಿತ್‌ ಸಿಂಗ್‌ ಸಂಧು, ಗುರುದಾಸ್‌ಪುರದ ಅಭ್ಯರ್ಥಿ ದಿನೇಶ್‌ ಸಿಂಗ್‌ ಮೊದಲಾದವರು ರೈತರ ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.