ತೆಲಂಗಾಣ: ರಾಜ್ಯಸಭಾ ಉಪಚುನಾವಣೆ: ಅಭಿಷೇಕ್‌ ಸಿಂಘ್ವಿ ಕಾಂಗ್ರೆಸ್ ಅಭ್ಯರ್ಥಿ ನವದೆಹಲಿ: ತನ್ನ ಪಕ್ಷದ ಆಡಳಿತವಿರುದ ತೆಲಂಗಾಣದಿಂದ ರಾಜ್ಯಸಭಾ ಉಪ ಚುನಾವಣೆಗೆ ಹಿರಿಯ ವಕೀಲ, ಮಾಜಿ ಸಂಸದ ಅಭಿಷೇಕ್‌ ಸಿಂಘ್ವಿ ಅವರನ್ನು ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಘೋಷಿಸಿದೆ. ಕಳೆದ ತಿಂಗಳು ಬಿಎಆರ್‌ಎಸ್‌ ನಾಯಕ ಕೆ.ಕೇಶವ ರಾವ್‌ ಅವರು ಕಾಂಗ್ರೆಸ್‌ಗೆ ಪಕ್ಷಾಂತರಗೊಂಡು, ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಉಪ ಚುನಾವಣೆ ನಿಗದಿಯಾಗಿದೆ. ರಾವ್‌ ಅವರ ಅವಧಿ 2026ರ ಏಪ್ರಿಲ್‌ವರೆಗೆ ಇತ್ತು. ಸಿಂಘ್ವಿ ಅವರು ಆಯ್ಕೆಯಾದರೆ, ಉಳಿದ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ತೆಲಂಗಾಣದಲ್ಲಿ 76 ಶಾಸಕರ ಬೆಂಬಲವನ್ನು ಕಾಂಗ್ರೆಸ್‌ ಹೊಂದಿದ್ದು, ಸಿಂಘ್ವಿ ಗೆಲ್ಲುವ ನಿರೀಕ್ಷೆಯಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.