ಆಮಿರ್ ಬಗ್ಗೆ ಗೌರವ ಇದೆ, ಆದ್ರೆ ಭಾರತ ಅತ್ಯಂತ ಸಹಿಷ್ಣುತೆ ದೇಶ: ವಿವೇಕ್ ಒಬೆರಾಯ್ ಒಬ್ಬ ಕಲಾವಿದನಾಗಿ ಆಮಿರ್ ಖಾನ್ ಅವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಭಾರತ ಪ್ರಪಂಚದಲ್ಲೇ ಅತ್ಯಂತ ಸಹಿಷ್ಣುತೆ ದೇಶ ಎಂದು ಬಾಲಿವುಡ್ ನಟ ವಿವೇಕ್ ... ಮುಂಬೈ: ಒಬ್ಬ ಕಲಾವಿದನಾಗಿ ಆಮಿರ್ ಖಾನ್ ಅವರ ಬಗ್ಗೆ ತುಂಬಾ ಗೌರವ ಇದೆ. ಆದರೆ ಭಾರತ ಪ್ರಪಂಚದಲ್ಲೇ ಅತ್ಯಂತ ಸಹಿಷ್ಣುತೆ ದೇಶ ಎಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರು ಹೇಳಿದ್ದಾರೆ. ಆಮಿರ್ ಖಾನ್ ಅವರ ಅಸಹಿಷ್ಣುತೆ ಹೇಳಿಕೆ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಒಬೆರಾಯ್, ಭಾರತ ಎಲ್ಲಾ ಧರ್ಮಗಳ ಮತ್ತು ಸಿದ್ಧಾಂತಗಳ ಒಂದು ಸಂಗಮವಾಗಿದೆ. ಹೀಗಾಗಿ ನಾನು ಭಾರತೀಯ ಪ್ರಜೆ ಆಗಿರುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ. 'ಅಮಿರ್ ಖಾನ್ ಅವರ ಅದ್ಭುತ ನಟನೆಯಿಂದಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಆದರೆ ಭಾರತ ವಿಶ್ವದಲ್ಲೇ ಅತ್ಯಂತ ಸಹಿಷ್ಣುತೆ ಇದೆ ಎಂಬ ಭಾವನೆ ಇದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಹೇಳಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ವಿರುದ್ಧದ ಸಾಂಸ್ಕೃತಿಕ ವಲಯದ ಜನಾಗ್ರಹಕ್ಕೆ ದನಿಗೂಡಿಸಿದ್ದ ಆಮೀರ್ ಖಾನ್, ಈ ವಾತಾವರಣದಿಂದ ಭೀತಗೊಂಡು ದೇಶ ತೊರೆದು ಹೋಗೋಣ ಎಂದು ಪತ್ನಿ ಸಲಹೆ ನೀಡಿರುವುದಾಗಿ ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಹಾಗೂ ಚಿತ್ರರಂಗದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾಗಿತ್ತು.