ಬಾಲಿವುಡ್ 'ಫೈರ್ ಬ್ರಾಂಡ್' ಕಂಗಾನ ರಣಾವತ್ ಭದ್ರತೆ ಕಲ್ಪಿಸಬೇಕು: ಬಿಜೆಪಿ ಒತ್ತಾಯ ಬಾಲಿವುಡ್ ಡ್ರಗ್ ಮಾಫಿಯಾದೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಫೈರ್‌ಬ್ರಾಂಡ್ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ ನಂತರ ಆಕೆಗೆ ಸೂಕ್ತ ಭದ್ರತೆ ಕಲ್ಪಿಸದಿರುವ ಮಹಾರಾಷ್ಟ್ರ ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಲುವನ್ನು ಬಿಜೆಪಿ ಪ್ರಶ್ನಿಸಿದೆ. ಮುಂಬೈ: ಬಾಲಿವುಡ್ ಡ್ರಗ್ ಮಾಫಿಯಾದೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಫೈರ್‌ಬ್ರಾಂಡ್ ನಟಿ ಕಂಗನಾ ರಣಾವತ್ ಟ್ವೀಟ್ ಮಾಡಿದ ನಂತರ ಆಕೆಗೆ ಸೂಕ್ತ ಭದ್ರತೆ ಕಲ್ಪಿಸದಿರುವ ಮಹಾರಾಷ್ಟ್ರ ರಾಜ್ಯ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿಲುವನ್ನು ಬಿಜೆಪಿ ಪ್ರಶ್ನಿಸಿದೆ. ಹಿಂದಿ ಚಲನ ಚಿತ್ರೋದ್ಯಮ ಡ್ರಗ್ ಮಾಫಿಯಾದೊಂದಿಗೆ ಹೊಂದಿರುವ ಸಂಬಂಧವನ್ನು ಕೊನೆಗಾಣಿಸಬೇಕು ಎಂದು ಅದು ಒತ್ತಾಯಿಸಿದೆ. ಬಾಲಿವುಡ್ ಡ್ರಗ್ ಮಾಫಿಯಾದೊಂದಿಗೆ ಹೊಂದಿರುವ ಸಂಬಂಧ ಸಾಬೀತುಪಡಿಸಲಿದ್ದೇನೆ ಎಂದು ಕಂಗಾನ ಹೇಳಿಕೆ ನೀಡಿ 100 ಗಂಟೆಗಳು ಕಳೆದಿದ್ದರೂ, ಆಕೆಗೆ ಮಹಾರಾಷ್ಟ್ರ ಸರ್ಕಾರ ಯಾವುದೇ ಭದ್ರತೆ ಕಲ್ಪಿಸದಿರುವುದು ಅತ್ಯಂತ ದುರದೃಷ್ಟಕರ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿರುವ ಪತ್ರದಲ್ಲಿ, ರಾಜ್ಯ ಬಿಜೆಪಿ ಹಿರಿಯ ನಾಯಕ ರಾಮ್ ಕದಂ ಕಳವಳ ವ್ಯಕ್ತಪಡಿಸಿದ್ದಾರೆ.ಬಾಲಿವುಡ್ ಸೆಲೆಬ್ರಿಟಿಗಳು, ರಾಜಕೀಯ ನಾಯಕರನ್ನು ಜನರು ಆದರ್ಶ ವ್ಯಕ್ತಿಗಳನ್ನಾಗಿ ಪರಿಗಣಿಸುತ್ತಾರೆ. ಈ ಹಿನ್ನಲೆಯಲ್ಲಿ ಬಾಲಿವುಡ್ ಡ್ರಗ್ ಮಾಫಿಯಾದೊಂದಿಗಿರುವ ಸಂಬಂಧವನ್ನು ಮಟ್ಟಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಕಂಗನಾ ರಣಾವತ್ ಅವರಿಗೆ ಮಹಾರಾಷ್ಟ್ರ ಸರ್ಕಾರ ಏಕೆ ಭದ್ರತೆ ನೀಡುತ್ತಿಲ್ಲ..? ಎಂದು ಅವರು ಪ್ರಶ್ನಿಸಿದ್ದಾರೆ.