'ಭಾವ ತೀರ ಯಾನ' ಮೂಲಕ ನಿರ್ದೇಶಕರಾಗಿ ಮಯೂರ-ತೇಜಸ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಫಸ್ಟ್ ಲವ್ ಭಾಗ ಮತ್ತು ಭಾಗ ಎಂಬ ಕಿರುಚಿತ್ರಗಳೊಂದಿಗೆ ತಮ್ಮ ಪ್ರಯಾಣ ಪ್ರಾರಂಭಿಸಿದ ನಿರ್ದೇಶಕರಾದ ಮಯೂರ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಅಂತಿಮವಾಗಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಫಸ್ಟ್ ಲವ್ ಭಾಗ ಮತ್ತು ಭಾಗ ಎಂಬ ಕಿರುಚಿತ್ರಗಳೊಂದಿಗೆ ತಮ್ಮ ಪ್ರಯಾಣ ಪ್ರಾರಂಭಿಸಿದ ನಿರ್ದೇಶಕರಾದ ಮಯೂರ ಅಂಬೆಕಲ್ಲು ಮತ್ತು ತೇಜಸ್ ಕಿರಣ್ ಅಂತಿಮವಾಗಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿದ್ದಾರೆ. ಅಂಕಣಕಾರ ಎಆರ್ ಮಣಿಕಾಂತ್ ಅವರಿಂದ ಪಡೆದ 'ಭಾವ ತೀರ ಯಾನ' ಎಂಬ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದ್ದು, ಈ ಇಬ್ಬರು ನಿರ್ದೇಶಕರೇ ಕಥೆ ಬರೆದಿದ್ದಾರೆ.ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಭಾಮಾ ಹರೀಶ್, ನಿತ್ಯಾನಂದ ಪ್ರಭು, ಕರಿಸುಬ್ಬು, ಶಿಲ್ಪಾ ಶ್ರೀನಿವಾಸ್, ಲಯನ್ ವೆಂಕಟೇಶ್ ಮತ್ತು ಪತ್ರಕರ್ತ ಮಣಿಕಾಂತ್ ಅವರ ಉಪಸ್ಥಿತಿಯಲ್ಲಿ ಚಿತ್ರವನ್ನು ಘೋಷಿಸಲಾಯಿತು. ಚಿತ್ರವು ಯುವಕನೊಬ್ಬರ ಪ್ರೀತಿಯ ಪ್ರಯಾಣದ ಸುತ್ತ ಕೇಂದ್ರೀಕೃತವಾಗಿದೆ. ಚಿತ್ರದಲ್ಲಿ ತೇಜಸ್ ಕಿರಣ್ ನಾಯಕನಾಗಿದ್ದು, ಆರೋಹಿ ನಾಯಕಿಯಾಗಿದ್ದಾರೆ.ಚಿತ್ರದಲ್ಲಿ ನಟ ರಮೇಶ್ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರತಂಡದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ 50 ವರ್ಷಗಳ ವೃತ್ತಿಜೀವನದಲ್ಲಿ ಇದು ತಮಗೆ ದೊರೆತ ವಿಶಿಷ್ಟ ಪಾತ್ರ ಎಂದು ಹೇಳಿದರು.'ಭಾವ ತೀರ ಯಾನವನ್ನು ಆರಂಭದಲ್ಲಿ ಎರಡು ಭಾಗಗಳ ಕಿರುಚಿತ್ರವಾಗಿ 40 ನಿಮಿಷ ರೂಪಿಸಲಾಯಿತು. ಬಳಿಕ ಹೊಸ ಪಾತ್ರಗಳ ಸೇರ್ಪಡೆಯೊಂದಿಗೆ ಅದನ್ನು 2 ಗಂಟೆ 10 ನಿಮಿಷಗಳವರೆಗೆ ವಿಸ್ತರಿಸಲಾಯಿತು' ಎಂದು ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಮಯೂರ ಹೇಳುತ್ತಾರೆ. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಶಾಲೇಶ್ ಅಂಬೆಕಲ್ಲು ಮತ್ತು ಲಕ್ಷ್ಮಣ ಬಿಕೆ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕ ಮಯೂರ ಅವರೇ ಸಂಗೀತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಚಿತ್ರಕ್ಕೆ ವಿಶಾಖ ನಾಗಲಾಪುರ ಸಂಭಾಷಣೆ ಬರೆದಿದ್ದು, ಶಿವಶಂಕರ ನೂರಂಬಡ ಅವರ ಡಿಒಪಿ ಚಿತ್ರಕ್ಕಿದೆ.