ರಿವೀಲ್ ಆಯ್ತು ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾ ಟೈಟಲ್: 'ಜ್ಯೂನಿಯರ್' ಆಗಿ ಕಿರೀಟಿ ರೆಡ್ಡಿ! ಜೂನಿಯರ್ ಸಿನಿಮಾದ ಸಣ್ಣ ಪುಟ್ಟ ಸಿನಿಮಾ ಏನೂ ಅಲ್ಲ. ಈ ಚಿತ್ರವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಬಿಗ್ ಬಜೆಟ್ ನಲ್ಲಿಯೇ ತಯಾರು ಮಾಡುತ್ತಿದೆ. ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ. ಜೂನಿಯರ್ ಸಿನಿಮಾದ ಸಣ್ಣ ಪುಟ್ಟ ಸಿನಿಮಾ ಏನೂ ಅಲ್ಲ. ಈ ಚಿತ್ರವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಬಿಗ್ ಬಜೆಟ್ ನಲ್ಲಿಯೇ ತಯಾರು ಮಾಡುತ್ತಿದೆ. ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ. ಈ ಚಿತ್ರದ ಚಿತ್ರೀಕರಣ ಈಗ ಭರದಿಂದ ಸಾಗಿದೆ. ಜೂನಿಯರ್ ಹೆಸರಿನ ಈ ಚಿತ್ರದ ಟೈಟಲ್ ಅನ್ನ ಕಿರೀಟಿ ರೆಡ್ಡಿ ಜನ್ಮ ದಿನದಂದು ಚಿತ್ರ ನಿರ್ಮಾಣ ಸಂಸ್ಥೆ ವಾರಾಹಿ ಯುಟ್ಯೂಬ್ ಚಾನೆಲ್ ನಲ್ಲಿ ರಿವೀಲ್ ಆಗಿದೆ. ಕಿರೀಟಿ ರೆಡ್ಡಿ ಅಭಿನಯದ ಈ ಚಿತ್ರದಲ್ಲಿ ಭಾರಿ ಬಹು ಭಾಷೆಯಲ್ಲಿ ರಿಲೀಸ್ ಅಗುತ್ತಿದೆ. ಕನ್ನಡ, ತೆಲುಗು,ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲು ಜೂನಿಯರ್ ಚಿತ್ರ ಬಿಡುಗಡೆ ಆಗಲಿದೆ. ಕಿರೀಟಿ ರೆಡ್ಡಿ ಅಭಿನಯದ ಜೂನಿಯರ್ ಸಿನಿಮಾವನ್ನ ರಾಧಾ ಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ.ಇದನ್ನೂ ಓದಿ: ರವಿಚಂದ್ರನ್ ಸರ್ ಜೊತೆ ಕೆಲಸ ಮಾಡಿದ್ದು ನನ್ನ ಪಾಲಿಗೆ ಅದ್ಭುತ: ಕಿರೀಟಿ ರೆಡ್ಡಿಕಿರೀಟಿಯ ಹೊರತಾಗಿ, ರಾಧಾಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಕುಶ್ಬೂ ಕೂಡ ನಟಿಸಿದ್ದಾರೆ. ಸಣ್ಣ ವಿರಾಮದ ನಂತರ ಜೆನಿಲಿಯಾ ದೇಶಮುಖ್ ಜ್ಯೂನಿಯರ್ ಮೂಲಕ ಮತ್ತೆ ಬೆಳ್ಳಿತೆರೆಗೆ ಬರುತ್ತಿದ್ದಾರೆ.ಮಾಯಾಬಜಾರ್’ ಸಿನಿಮಾ ನಿರ್ದೇಶನ ಮಾಡಿ ರಾಧಾಕೃಷ್ಣ ರೆಡ್ಡಿ ಗಮನ ಸೆಳೆದಿದ್ದಾರೆ. ಅವರೇ ಈಗ ಕಿರೀಟಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮ್ ಪ್ರೊಡಕ್ಷನ್’ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.ಇದನ್ನೂ ಓದಿ: ಕಿರೀಟಿ ರೆಡ್ಡಿ ಸಿನಿಮಾ ಮೂಲಕ ಮತ್ತೆ ಬರುತ್ತಿದೆ 'ರಣಧೀರ' ಜೋಡಿ: ಹಲವು ವರ್ಷಗಳ ನಂತರ ಕನ್ನಡಕ್ಕೆ 'ಸತ್ಯ'ನ ರಾಣಿ ಎಂಟ್ರಿ!ದೊಡ್ಡ ಬಜೆಟ್ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಬಾಹುಬಲಿ ಛಾಯಾಗ್ರಾಹಕ ಸೆಂಥಿಲ್ ಕುಮಾರ್, ಸಂಗೀತ ಸಂಯೋಜಕ ದೇವಿ ಪ್ರಸಾದ್ ಮತ್ತು ಸ್ಟಂಟ್ ಕೊರಿಯೋಗ್ರಾಫರ್ ಪೀಟರ್ ಹೆನ್ ಅವರಂತಹ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.