2015ರಲ್ಲಿ ಇಸ್ರೋದಿಂದ ಪುನರ್ಬಳಕೆ ವಾಹಕ ಉಡಾವಣೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2015ರ ಮಧ್ಯದಲ್ಲಿ ವಿನೂತನ ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕವನ್ನು ಉಡಾಯಿಸಲು ಸಜ್ಜಾಗಿದೆ... ಕೋವಲಂ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2015ರ ಮಧ್ಯದಲ್ಲಿ ವಿನೂತನ ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕವನ್ನು ಉಡಾಯಿಸಲು ಸಜ್ಜಾಗಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಕನಸಿನ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು, - - (-) ಅನ್ನು 2015 ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಅವರು, ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕ ಯೋಜನೆ ಪ್ರಗತಿಯಲ್ಲಿದ್ದು, ಇದೇ ವರ್ಷದ ಜೂನ್ ತಿಂಗಳ ಅಂತ್ಯ ಅಥವಾ ಜುಲೈ ತಿಂಗಳ ಆರಂಭಿಕ ಭಾಗದಲ್ಲಿ ವಾಹಕವನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು. ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆ ಕುರಿತಂತೆ ಕೇರಳದ ಕೋವಲಂ ನಲ್ಲಿ ನಡೆದ 3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಇಸ್ರೋದ ಕನಸಿನ ಯೋಜನೆಯ ಕುರಿತು ಮಾಹಿತಿ ನೀಡಿದ ಅವರು, ಯೋಜನೆ ಕುರಿತಂತೆ ಈ ಉಡಾವಣೆ ಮೊದಲ ಹೆಜ್ಜೆಯಾಗಿದ್ದು, ಸಾಕಷ್ಟು ಪ್ರಕ್ರಿಯೆ ಬಾಕಿ ಇದೆ. ವಿಜ್ಞಾನಿಗಳು ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು. ಇದು ಮಾನವ ರಹಿತ, ಉಪಕಕ್ಷೀಯ (, - ) ಉಡಾವಣೆಯಾಗಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದ ಎರಡನೇ ಲಾಂಚ್ ಪ್ಯಾಡ್ ನಿಂದ ಉಡಾಯಿಸಲಾಗುತ್ತದೆ. ಈ ವೇಳೆ ರಾಕೆಟ್ ರಾಕೆಟ್ನಲ್ಲಿರುವ ಘನ ಇಂಧನವನ್ನು ಬಳಸಿಕೊಳ್ಳಲ್ಲಿದ್ದು, ಉಡಾವಣಾ ವಾಹಕದ ಮೊದಲ ಭಾಗವು ಭೂಮಿಗೆ ವಾಪಸಾಗಲಿದೆ. ಎರಡನೇ ಭಾಗವು ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿದ ಬಳಿಕ ಅಲ್ಲಿಯೇ ಉರಿದುಹೋಗುತ್ತದೆ. ಪ್ರಸ್ತುತ ಇಸ್ರೋ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು () (), ಗಳನ್ನು ಬಳಕೆ ಮಾಡಲಾಗುತ್ತಿದೆ. 'ಸುದರ್ಶನ'ಕ್ಕೆ ತಯಾರಿ ನಡೆಸುತ್ತಿದೆ ಡಿಆರ್ ಡಿಒ ಪುನರ್ಬಳಕೆ ಉಡಾವಣಾ ವಾಹಕದಂತೆ ಪುನರ್ಬಳಕೆ ಮಾಡಬಲ್ಲ ಕ್ಷಿಪಣಿ ತಯಾರಿಗೆ ಡಿಆರ್ ಡಿಒ ಸಂಶೋಧನೆ ನಡೆಸುತ್ತಿದ್ದು, ಭಗವದ್ಗೀತೆಯಲ್ಲಿ ಉಲ್ಲೇಖವಾಗುವ ಸುದರ್ಶನ ಆಯುಧದ ಮಾದರಿಯಲ್ಲಿ ಶುತ್ರುಪಾಳಯವನ್ನು ವಿನಾಶ ಮಾಡಿ ಮತ್ತೆ ವಾಪಸ್ ಆಗಬಲ್ಲ ಸುದರ್ಶನ ಕ್ಷಿಪಣಿಗಳನ್ನು ತಯಾರಿಸಲು ಡಿಆರ್ ಡಿಒ ಯೋಜನೆ ರೂಪಿಸಿದೆ.