ಭಾರತದ ಮಂಗಳಯಾನಕ್ಕೆ ಶತಕ ಸಂಭ್ರಮ ೨೦೧೫ ಹೊಸವರ್ಷದ ದಿನ ಭಾರತದ ಮಂಗಳ ಬಾಹ್ಯಾಕಾಶ ನೌಕೆ ಚೆನ್ನೈ: ೨೦೧೫ ಹೊಸವರ್ಷದ ದಿನ ಭಾರತದ ಮಂಗಳ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಕಕ್ಷೆಯ ಸುತ್ತ ೧೦೦ ದಿನಗಳನ್ನು ಪೂರೈಸಿದೆ, ಎಂದು ಬಾಹ್ಯಾಕಾಶ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟಬಂರ್ ೨೪ ೨೦೧೪ ರಂದು ಮಂಗಳನ ಕಕ್ಷೆಗೆ ಮಾರ್ಸ್ ಬಾಹ್ಯಾಕಾಶ ನೌಕೆಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಳಿಸಿತ್ತು. ಈ ಯಾನ ಕೆಂಪು ಗ್ರಹದ ಮೇಲ್ಮೈನ ಹಲವಾರು ಫೋಟೋಗಳನ್ನು ರವಾನಿಸಿದ್ದು, ವಿಜ್ಞಾನಿಗಳು ಅವುಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ೪೫೦ ಕೋಟಿ ವೆಚ್ಚದಲ್ಲಿ ಪಿ ಎಸ್ ಎಲ್ ವಿ ರಾಕೆಟ್ ಮೂಲಕ ಈ ಬಾಹ್ಯಾಕಾಶ ಯಾನವನ್ನು ಉಡಾಯಿಸಲಾಗಿತ್ತು. ಈ ಊಡಾಯನದ ಮೂಲಕ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ಯಾನವನ್ನು ಕಳುಹಿಸಿರುವ ಭಾರತ ಏಷ್ಯಾದ ಮೊದಲ ರಾಷ್ಟ್ರವಾಗಿದೆ.