ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆ ಸಂಗೀತಗಾರರ ಕುಟುಂಬದಿಂದ ಬಂದ ಮಹತಿ 2ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸದಲ್ಲಿ ನಿರತಳಾಗಿದ್ದಾಳೆ. ತನ್ನ ವಯಸ್ಸಿನ ಮಕ್ಕಳ ಭಾವನೆ ಮತ್ತು ಸಮಸ್ಯೆಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ಆಕೆ ಹಾಡು ರೂಪಿಸಿದ್ದಾಳೆ ಮುಂಬೈ: ಭಾರತದ ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ದಂಪತಿಗಳಾದ ವಯೊಲಿನ್ ವಾದಕ ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರ ಕುಟುಂಬದ ಮೂರನೇ ತಲೆಮಾರಿನ ಕಲಾವಿದೆ, ಮಹತಿ ಸುಬ್ರಮಣಿಯಂ ಚಿಕ್ಕ ವಯಸ್ಸಿಗೇ ತಮ್ಮ ಮೊದಲ ಮ್ಯೂಸಿಕ್ ವಿಡಿಯೊ ಬಿಡುಗಡೆಗೊಳಿಸಿದ್ದಾರೆ. ಆಕೆಗಿನ್ನೂ 10 ವರ್ಷ ಎನ್ನುವುದು ಅಚ್ಚರಿ ಪಡಬೇಕಾದ ವಿಷಯ.ಇದನ್ನೂ ಓದಿ: ಕೋಚಿಂಗ್ ಪಡೆಯಲು ಆರ್ಥಿಕ ಮುಗ್ಗಟ್ಟು: ಯೂಟ್ಯೂಬ್ ತರಗತಿ, ಪುಸ್ತಕಗಳ ನೆರವಿನಿಂದಲೇ ಎನ್ಇಇಟಿ ತೇರ್ಗಡೆಯಾದ ರಿತಿಕಾ!ಮಹತಿ ಸುಬ್ರಮಣಿಯಂ, ಎಲ್. ಬಾಲಸುಬ್ರಮಣಿಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರ ಪುತ್ರಿ ಕಲಾ ಶಾಲೆಯ ಸ್ಥಾಪಕಿಯಾಗಿರುವ ಬಿಂದು ಸುಬ್ರಮಣಿಯಂ ಅವರ ಮಗಳು. ಈ ಹಾಡನ್ನು ತಾನೇ ಬರೆದು, ಸಂಗೀತ ರೂಪಿಸಿ, ಹಾಡಿದ್ದಲ್ಲದೆ ಮ್ಯೂಸಿಕ್ ವಿಡಿಯೋದಲ್ಲಿ ಅಭಿನಯಿಸಿದ್ದಾಳೆ ಮಹತಿ. ಇದನ್ನೂ ಓದಿ: ಪ್ರವಾಹದಿಂದ ರಕ್ಷಿಸಲ್ಪಟ್ಟ ಹೆಣ್ಣುಮಗುವಿನ ಹುಟ್ಟುಹಬ್ಬ ಅಚರಿಸಿದ ಚೆನ್ನೈ ಪೊಲೀಸರುಬಹುಮುಖ ಪ್ರತಿಭೆಯಾಗಿರುವ ಮಹತಿ ತಾತನಂತೆಯೇ ವಯೊಲಿನ್ ವಾದಕಿಯಾಗಿದ್ದಾಳೆ. ವಯೊಲಿನ್ ಜೊತೆಗೆ ಪಿಯಾನೊವನ್ನು ಕಲಿಯುತ್ತಿದ್ದಾಳೆ. ಅದರ ಜೊತೆಗೆ ಗಾಯಕಿ, ಗೀತೆ ರಚನೆಕಾರ್ತಿಯೂ ಆಗಿರುವ ಮಹತಿ ಹುಬ್ಬೇರಿಸುವಂತೆ ಮಾಡಿದ್ದಾಳೆ.ತಾನು ಬರೆದ ಹಾಡನ್ನು ಹಾಡಿರುವ ಮಹತಿ ತನ್ನ ಮ್ಯೂಸಿಕ್ ವಿಡಿಯೋದಲ್ಲಿ ಜಿಮ್ನಾಸ್ಟಿಕ್ ಅನ್ನೂ ಪ್ರದರ್ಶನ ಮಾಡಿರುವುದು ಎಂಥವರಿಗೂ ರೋಮಾಂಚನವನ್ನು ಉಂಟುಮಾಡುತ್ತದೆ. ಇದನ್ನೂ ಓದಿ: ಅಜೀಂ ಪ್ರೇಮ್ ಜಿ ಯುನಿವರ್ಸಿಟಿ ಯಿಂದ ಹಳೆಯ ಪಠ್ಯಪುಸ್ತಕಗಳ ಸಂಗ್ರಹ ಲೋಕಾರ್ಪಣೆಸಂಗೀತಗಾರರ ಕುಟುಂಬದಿಂದ ಬಂದ ಮಹತಿ 2ನೇ ವಯಸ್ಸಿನಿಂದಲೇ ಸಂಗೀತಾಭ್ಯಾಸದಲ್ಲಿ ನಿರತಳಾಗಿದ್ದಾಳೆ. ತನ್ನ ವಯಸ್ಸಿನ ಮಕ್ಕಳ ಭಾವನೆ ಮತ್ತು ಸಮಸ್ಯೆಗಳನ್ನು ವ್ಯಕ್ತಪಡಿಸುವ ಉದ್ದೇಶದಿಂದ ಈ ಹಾಡು ರೂಪಿಸಿದ್ದಾಗಿ ಮಹತಿ ಹೇಳುತ್ತಾಳೆ. ಇದನ್ನೂ ಓದಿ: ರಾಂಚಿಯಲ್ಲೊಂದು ಮಕ್ಕಳ ಬ್ಯಾಂಕ್ 'ಬಾಲ ವಿಕಾಸ್ ಖಜಾನ'; ಪ್ರಜಾಪ್ರಭುತ್ವ ಮೌಲ್ಯಗಳ ಕಲಿಸುವ ಉದ್ದೇಶಕನ್ನಡ ಭಾಷೆ-ಸಾಹಿತ್ಯ ಸೇವೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯಮುಂದಿನ ಪೀಳಿಗೆಗೆ ಜ್ಞಾನ ಮತ್ತು ಜೀವನ ಕೌಶಲ್ಯಗಳ ಸಂಪತ್ತನ್ನು ಧಾರೆ ಎರೆಯುತ್ತಿರುವ ಅನ್ಮೋಲ್ ಯೋಗ ಕೇಂದ್ರ!ಯುಎಸ್ಎ ಕೊಲೊರಾಡೋ ಪೊಲೀಸ್ ಪಡೆಯಲ್ಲಿರುವ ಏಕೈಕ ಭಾರತೀಯ ಪ್ರೇಮ್ ಮೆನನ್!ಟೈಪ್ 1 ಮಧುಮೇಹವನ್ನು ಮೆಟ್ಟಿನಿಂತ ಯೋಧನ ಯಶೋಗಾಥೆ...ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ: ಕೃಷಿ ಮೇಳ ಉದ್ಘಾಟಿಸಿದ ರೈತ ಮಹಿಳೆ ಪ್ರೇಮ ದಾಸಪ್ಪ ಸತ್ಯ ಕಥೆ!ಬರಿಗಾಲಲ್ಲಿ ಹೋಗಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ, ತುಳಸಿಗೌಡ: ಸರಳತೆ, ದೃಢ ಸಂಕಲ್ಪಕ್ಕೆ ಮೆಚ್ಚುಗೆಯ ಮಹಾಪೂರನಾಯಿ ಕಣ್ಣು.. ನರಿ ಕಣ್ಣು... ರಾಷ್ಟ್ರಪತಿಗಳಿಗೆ ದೃಷ್ಟಿ ನೀವಳಿಸಿ ಪ್ರಶಸ್ತಿ ಪಡೆದ ಮಂಜಮ್ಮ ಜೋಗತಿ: ವಿಡಿಯೋ ವೈರಲ್ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟಿದ ಹರೇಕಳ ಹಾಜಬ್ಬಗೆ ಪದ್ಮಶ್ರೀ, ಪ್ರಶಸ್ತಿ ಗೌರವ ಹೆಚ್ಚಿಸಿದ ಅಕ್ಷರ ಸಂತ