'ನೀವು ಉಳಿಸಿದ ರನ್‌ಗಳ ಸಂಖ್ಯೆಯನ್ನು ಎಣಿಸಲು ದಿನಗಳು ಬೇಕಾಗಬಹುದು': ಸುರೇಶ್ ರೈನಾಗೆ ಪ್ರಧಾನಿ ಮೋದಿ ಪತ್ರ ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಆಗಸ್ಟ್ 15 ರಂದು ಎಂಎಸ್ ಧೋನಿ ಅವರೊಂದಿಗೆ ನಿವೃತ್ತಿ ಘೋಷಿಸಿ ಒಂದು ಸುವರ್ಣ ಯುಗಕ್ಕೆ ಅಂತ್ಯ ಹಾಡಿದ್ದಾರೆ. . ಇಷ್ಟು ದಿನ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಎರಡು ಅತ್ಯಂತ ಯಶಸ್ವಿವ್ಯಕ್ತಿಗಳು ತಮ್ಮ ವೃತ್ತಿಬದುಕಿಗೆ ವಿದಾಯ ಹೇಳಿದ್ದು ಅವರ ಮುಂದಿನ ಜೀವನಕ್ಕೆ ಜಗತ್ತಿನ ನಾನಾ ಕಡೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ನವದೆಹಲಿ: ಟೀಂ ಇಂಡಿಯಾ ಆಟಗಾರ ಸುರೇಶ್ ರೈನಾ ಆಗಸ್ಟ್ 15 ರಂದು ಎಂಎಸ್ ಧೋನಿ ಅವರೊಂದಿಗೆ ನಿವೃತ್ತಿ ಘೋಷಿಸಿ ಒಂದು ಸುವರ್ಣ ಯುಗಕ್ಕೆ ಅಂತ್ಯ ಹಾಡಿದ್ದಾರೆ. . ಇಷ್ಟು ದಿನ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ಎರಡು ಅತ್ಯಂತ ಯಶಸ್ವಿವ್ಯಕ್ತಿಗಳು ತಮ್ಮ ವೃತ್ತಿಬದುಕಿಗೆ ವಿದಾಯ ಹೇಳಿದ್ದು ಅವರ ಮುಂದಿನ ಜೀವನಕ್ಕೆ ಜಗತ್ತಿನ ನಾನಾ ಕಡೆಯಿಂದ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಧೋನಿಗಾಗಿ ವಿಶೇಷ ಪತ್ರ ಬರೆದಂತೆ ಸುರೇಶ್ ರೈನಾಗೆ ಸಹ ಪತ್ರ ಬರೆದಿದ್ದಾರೆ. "ಈ ತಲೆಮಾರಿನವರು ನಿಮ್ಮನ್ನು ಉತ್ತಮ ಬ್ಯಾಟ್ಸ್‌ಮನ್‌ನಂತೆ ಮಾತ್ರವಲ್ಲದೆ ಬೇಡಿಕೆಯಿದ್ದಾಗ ಅತ್ಯಂತ ಉಪಯುಕ್ತ ಬೌಲರ್ ಆಗಿ ಸಹ ನೆನಪಿಸಿಕೊಳ್ಳುತ್ತಾರೆ. ನಿಮ್ಮ ಫೀಲ್ಡಿಂಗ್ ಅನುಕರಣೀಯ ಮತ್ತು ಸ್ಪೂರ್ತಿದಾಯಕವಾಗಿದೆ. ಇತ್ತೀಚಿನ ಕೆಲವು ಅತ್ಯುತ್ತಮ ಕ್ಯಾಚ್‌ಗಳು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮ್ಮ ವಿಶಿಷ್ಟ ಛಾಪು ಮೂಡಲು ಕಾರಣವಾಗಿದೆ, ಮೈದಾನದಲ್ಲಿ ನೀವು ಉಳಿಸಿದ ರನ್‌ಗಳ ಸಂಖ್ಯೆಯನ್ನು ಎಣಿಸಲು ದಿನಗಳು ಬೇಕಾಗಬಹುದು. "ಪ್ರಧಾನಿ ಹೇಳಿದ್ದಾರೆ. , & . ’ . @ & . . !